ದೇವಾಲಯಗಳ ಚಕ್ರವರ್ತಿ ಇಟಗಿಯ ಮಹಾದೇವ ದೇವಾಲಯದ ವಿಶೇಷತೆ


ದೇವಾಲಯ ಚಕ್ರವರ್ತಿ - ಇಟಗಿ ಮಹಾದೇವ ದೇವಸ್ಥಾನ

ದೇವಾಲಯ ನಿರ್ಮಾಣದ ಕಲೆಯನ್ನು ಪರಿಪೂರ್ಣಗೊಳಿಸಿದ ಕೀರ್ತಿ ಹೊಯ್ಸಳರಿಗೆ ಸಲ್ಲುತ್ತದೆಯಾದರೂ, ಮೊದಲ ಪ್ರಗತಿಯನ್ನು ಕಲ್ಯಾಣದ ಚಾಲುಕ್ಯರು ಮಾಡಿದರು. ಕಲ್ಯಾಣ ಚಾಲುಕ್ಯ ದೇವಾಲಯದ ವಾಸ್ತುಶಿಲ್ಪದ ಅತ್ಯುತ್ತಮ ಮಾದರಿಯೆಂದರೆ ಇಟಗಿಯ ಮಹಾದೇವ ದೇವಾಲಯ. ಹಂಪಿಯಿಂದ ಕೇವಲ ಒಂದು ಗಂಟೆಯ ಪ್ರಯಾಣದಲ್ಲಿ, ಈ ದೇವಾಲಯವನ್ನು ದೇವಾಲಯ ಚಕ್ರವರ್ತಿ ಎಂದು 1112 CE ದಿನಾಂಕದ ಶಾಸನದಲ್ಲಿ ವಿವರಿಸಲಾಗಿದೆ ಅಂದರೆ ದೇವಾಲಯಗಳಲ್ಲಿ ಚಕ್ರವರ್ತಿ. ಕಲಾ ಇತಿಹಾಸಕಾರ ಹೆನ್ರಿ ಕೂಸೆನ್ಸ್ ಈ ಸ್ಮಾರಕವನ್ನು 'ಹಳೇಬೀಡು ನಂತರ ಕನ್ನಡ ನಾಡಿನಲ್ಲೇ ಅತ್ಯುತ್ತಮ' ಎಂದು ಬಣ್ಣಿಸಿದ್ದಾರೆ.

ಈ ದೇವಾಲಯವನ್ನು 1112 CE ನಲ್ಲಿ ರಾಜ ವಿಕ್ರಮಾದಿತ್ಯ VI ರ ದಂಡನಾಯಕ (ಸೇನೆಯ ಜನರಲ್) ಮಹಾದೇವ ನಿರ್ಮಿಸಿದನು. ಇದು ಪೂರ್ವಾಭಿಮುಖವಾದ ಗರ್ಭಗೃಹವನ್ನು ಹೊಂದಿದ್ದು, ಎರಡು ಮುಖಮಂಟಪಗಳಿಂದ ಸುತ್ತುವರಿದ ಮುಚ್ಚಿದ ಸಭಾಂಗಣಕ್ಕೆ ವೆಸ್ಟಿಬುಲ್ ಮೂಲಕ ಸಂಪರ್ಕಿಸಲಾದ ಲಿಂಗವನ್ನು ಹೊಂದಿದೆ, ಇದು ದೇವಾಲಯದ ಪ್ರವೇಶದ್ವಾರಗಳಾಗಿಯೂ ಕಾರ್ಯನಿರ್ವಹಿಸುತ್ತದೆ. ದೇವಾಲಯದ ಮುಂಭಾಗದಲ್ಲಿ ಮುಖಮಂಟಪ ಎಂದು ಕರೆಯಲ್ಪಡುವ ಮತ್ತೊಂದು ಸ್ತಂಭದ ತೆರೆದ ಸಭಾಂಗಣವಿದೆ, ಕಿರಿದಾದ ಹಾದಿಯ ಮೂಲಕ ಅದಕ್ಕೆ ಸಂಪರ್ಕಿಸಲಾಗಿದೆ. ಕಿರಿದಾದ ಹಾದಿಯು ಲಿಂಗಕ್ಕೆ ಎದುರಾಗಿರುವ ಭಾಗಶಃ ನಾಶವಾದ ನಂದಿಯನ್ನು ಹೊಂದಿದೆ. ಮುಚ್ಚಿದ ಸಭಾಂಗಣದ ದ್ವಾರವು 9 ಜಾಂಬ್‌ಗಳೊಂದಿಗೆ ಜಟಿಲವಾಗಿದೆ, ಪ್ರತಿಯೊಂದೂ ವಿಭಿನ್ನ ವಿನ್ಯಾಸವನ್ನು ಹೊಂದಿದೆ ಮತ್ತು ಕೆಲವು ಮೂರು ಆಯಾಮಗಳಾಗಿವೆ! ಮುಖಮಂಟಪದ ಚಾಕಿ ತಿರುಗಿದ ಸ್ತಂಭಗಳು ಚೆನ್ನಾಗಿ ಕೆತ್ತಲಾದ ತಳಹದಿಗಳನ್ನು ಹೊಂದಿದ್ದು ಪ್ರತಿಯೊಂದಕ್ಕೂ ವಿಭಿನ್ನ ಶಿಲ್ಪಗಳಿವೆ. ದೇವಾಲಯದ ಪ್ರತಿರೋಧದ ತುಣುಕು ದೇವಾಲಯದ ಮಕರತೋರಣ (ಲಿಂಟೆಲ್) ಆಗಿದ್ದು, ಇದನ್ನು ಪರಿಪೂರ್ಣತೆಗೆ ಕೆತ್ತಲಾಗಿದೆ, ಇದು ಚಿಕ್ಕ ಸಂಗೀತಗಾರರಿಂದ ಸುತ್ತುವರೆದಿರುವ ನೃತ್ಯ ಮಾಡುವ ಶಿವನನ್ನು ಚಿತ್ರಿಸುತ್ತದೆ. ಶಿವನ ಎರಡೂ ಬದಿಯಲ್ಲಿ ಚೌರಿಧಾರಿಗಳಿಂದ ಸುತ್ತುವರಿದ ನಿಂತಿರುವ ಭಂಗಿಯಲ್ಲಿ ಬ್ರಹ್ಮ ಮತ್ತು ವಿಷ್ಣು ಇದ್ದಾರೆ. ಮಕರಗಳು ಎಂಬ ಪೌರಾಣಿಕ ಪ್ರಾಣಿಗಳು ಲಿಂಟಲ್‌ನ ಎರಡು ತುದಿಗಳನ್ನು ಮುಚ್ಚುತ್ತವೆ. ಗರ್ಭಗುಡಿಯ ಮೇಲಿರುವ ಗೋಪುರವು ವಿಶಿಷ್ಟವಾದ ಆಕಾರವನ್ನು ಹೊಂದಿದೆ - ನಕ್ಷತ್ರಾಕಾರದ ಪಿರಮಿಡ್ ಮತ್ತು ಪುನರಾವರ್ತಿತ ಲಕ್ಷಣಗಳಿಂದ ಉತ್ತಮವಾಗಿ ಅಲಂಕರಿಸಲ್ಪಟ್ಟಿದೆ. ನೀವು ಹತ್ತಿರದಿಂದ ನೋಡಿದರೆ ಗೋಪುರವನ್ನು ಹತ್ತುತ್ತಿದ್ದಂತೆಯೇ ಅಲ್ಲೊಂದು ಇಲ್ಲೊಂದು ಮಂಗಗಳು ಕಾಣಿಸುತ್ತವೆ. ಈ ದೇವಾಲಯವು ಶೃಂಗಾರಕ್ಕೆ ಹೆಸರುವಾಸಿಯಾಗಿದೆ.

IMG_2852
ಹಿಂಬದಿಯಿಂದ ನೋಡಿದರೆ ಇಟಗಿಯ ಮಹಾದೇವ ದೇವಾಲಯ

ಮುಖ್ಯ ದೇವಾಲಯದ ಉತ್ತರಕ್ಕೆ ಐದು ದೇವಾಲಯಗಳಿವೆ, ಅವುಗಳಲ್ಲಿ ಎರಡು ಮಹಾದೇವನ ಪೋಷಕರಾದ ಮೂರ್ತಿನಾರಾಯಣ ಮತ್ತು ಚಂದ್ರಲೇಶ್ವರಿಗೆ ಸಮರ್ಪಿತವಾಗಿವೆ. ಮುಖ್ಯ ದೇವಾಲಯದ ಸುತ್ತಲೂ ಶಿವಲಿಂಗಗಳಿರುವ 13 ದೇವಾಲಯಗಳಿದ್ದು, ಅವೆಲ್ಲವೂ ಶಿಥಿಲಾವಸ್ಥೆಯಲ್ಲಿವೆ. ಕಾಂಪೌಂಡ್ ಗೋಡೆಗೆ ವಿರುದ್ಧವಾಗಿ ಸಡಿಲವಾದ ಕಲ್ಲುಗಳು, ಸ್ತಂಭಗಳು, ಕಂಬಗಳು ಮತ್ತು ಪ್ರತಿಮೆಗಳು ಬಿದ್ದಿವೆ. ಹುಲ್ಲುಹಾಸಿನ ಮಧ್ಯದಲ್ಲಿ ಬ್ರಹ್ಮನ ವಿರೂಪಗೊಳಿಸಿದ ಪ್ರತಿಮೆಯನ್ನು (ಲಕ್ಕುಂಡಿಯಲ್ಲಿರುವಂತೆ) ಸ್ಥಾಪಿಸಲಾಗಿದೆ.

IMG_2832
ಮಕರತೋರಣ

ಕಲ್ಯಾಣ ಚಾಲುಕ್ಯರು ಮೊದಲು ಸಾಬೂನು ಕಲ್ಲನ್ನು ಮುಖ್ಯ ವಸ್ತುವಾಗಿ ಬಳಸಿದರು. ಅಲ್ಲಿಯವರೆಗೆ ಮರಳುಗಲ್ಲಿನಿಂದ ದೇವಾಲಯಗಳನ್ನು ನಿರ್ಮಿಸಲಾಗುತ್ತಿತ್ತು. ಅಣ್ಣಿಗೇರಿಯಲ್ಲಿರುವ ಅಮೃತೇಶ್ವರ ದೇವಾಲಯವು ಸೋಪ್‌ಸ್ಟೋನ್‌ನಿಂದ ನಿರ್ಮಿಸಲಾದ ಮೊದಲನೆಯದು ಮತ್ತು ಈ ದೇವಾಲಯದ ಮೂಲಮಾದರಿ ಎಂದು ಪರಿಗಣಿಸಲಾಗಿದೆ. ಹೊಯ್ಸಳ ಬಿಲ್ಡರ್‌ಗಳು ಈ ಹೊಸ ವಸ್ತುವನ್ನು ಬಳಸುವುದನ್ನು ಮುಂದುವರೆಸಿದರು ಮತ್ತು ಅದರ ಗುಣಲಕ್ಷಣಗಳನ್ನು ಸಂಪೂರ್ಣವಾಗಿ ಬಳಸಿಕೊಂಡರು.

ದೇವಾಲಯದ ಮುಂಭಾಗದಲ್ಲಿ ಪುಷ್ಕರಣಿ (ಟ್ಯಾಂಕ್) ಇದೆ, ಇದನ್ನು ಇಂದಿಗೂ ಗ್ರಾಮಸ್ಥರು ಬಳಸುತ್ತಾರೆ ಮತ್ತು ದೇವಾಲಯದ ಹಿಂದೆ ಮೆಟ್ಟಿಲುಗಳನ್ನು ಹೊಂದಿರುವ ತೆರೆದ ಬಾವಿ. ಮಹಾದೇವ ದೇವಾಲಯವು ಕರ್ನಾಟಕದ ಕೊಪ್ಪಳ ಜಿಲ್ಲೆಯ ಇಟಗಿ ಪಟ್ಟಣದಲ್ಲಿದೆ. ಇದು ಕುಕನೂರಿನಿಂದ (ಮಹಾಮಾಯ ಮತ್ತು ನವಲಿಂಗ ದೇವಸ್ಥಾನ) ಸುಮಾರು 7 ಕಿಮೀ ಮತ್ತು ಲಕ್ಕುಂಡಿಯಿಂದ 20 ಕಿಮೀ ದೂರದಲ್ಲಿದೆ (ದೇವಾಲಯಗಳು ಮತ್ತು ಮೆಟ್ಟಿಲು ಬಾವಿಗಳಿಂದ ಕೂಡಿದ ಗ್ರಾಮ). ನೀವು ಕರ್ನಾಟಕದ ಆ ಭಾಗದಲ್ಲಿದ್ದರೆ ಈ ಎಲ್ಲಾ ಸ್ಥಳಗಳು ಭೇಟಿ ನೀಡಲೇಬೇಕು.

ದೇವಾಲಯಗಳ ಚಕ್ರವರ್ತಿ ಇಟಗಿಯ ಮಹಾದೇವ ದೇವಾಲಯದ ವಿಶೇಷತೆ https://youtu.be/QXkLFL6Ku8o?si=e0dzxHzzBP75luQ

ಕಠಿಣ ಶಿಲ್ಪಪ್ರಕಾರಗಳಲ್ಲೇ ಈ ದೇವಾಲಯ ಅನನ್ಯ ಮತ್ತು ಅಮರ. ಸರಳ ಕೃತಿಗಳಲ್ಲಿ ಹುದುಗಿದ್ದ ನನ್ನ ಮನಸ್ಸಿಗೆ ಮುದನೀಡಿದ ಈ ದೇವಾಲಯದ ಶಿಲ್ಪ ಸೌಂದರ್ಯ, ನನ್ನನ್ನು ವಿಸ್ಮಯನನ್ನಾಗಿಸಿದೆ. ಹೀಗೆಂದು ಹೇಳಿದವರು ಬೇರಾರೂ ಅಲ್ಲ, ನಡೆದಾಡುವ ವಿಶ್ವಕೋಶ ಜ್ಞಾನಪೀಠ ಪ್ರಶಸ್ತಿ ವಿಜೇತರು ಆದ ಡಾ ಶಿವರಾಮ ಕಾರಂತರು ಹೇಳಿದ ಮಾತಿದು. ಹಳೇಬಿಡು - ಬೇಲೂರು ದೇವಸ್ಥಾನಗಳನ್ನು ನೋಡಿ ಡಾ. ಶಿವಕಾಮ ಕಾರಂತರು ಹೇಳಿದರೆಂದು ತಿಳಿಯಬೇಡಿ. ಅವರು ಹೇಳಿದ್ದು ದೇವಾಲಯ ಚಕ್ರವರ್ತಿಯಿಂದು ಹೊಗಳಿಸಿಕೊಂಡು, ಬೇಲೂರು-ಹೊಯ್ಸಳರ ನಾವಿನ್ಯಕ್ಕೆ ಕೊಂಡಿಯಾದ ದೇವಸ್ಥಾನವೊಂದರ ಬಗ್ಗೆ, ಅದು ಇಟಗಿಯ ಮಹದೇವ ದೇಗುಲ, ಕೇವಲ ಹಂಪೆ, ಬಾದಾಮಿ, ಬಿಜಾಪುರಗಳಷ್ಟೇ ಈ ಶಿಲ್ಪ ಕೃತಿಗಳಿಗೆ, ಐತಿಹಾಸಿಕ ಇಮಾರತ್ತುಗಳಿಗೆ ಹೆಸರಾಗಿರುವ ಪ್ರವಾಸೋದ್ಯಮ ನಿಗಮ ಸರ್ಕಾರ ಇವುಗಳಿಗೆ ಅತಿ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಲೇ, ಅನೇಕಾನೇಕ ಶಿಲ್ಪ ಸೌಂದರ್ಯ ತಾಣಗಳನ್ನು ನಿರ್ಲಕ್ಷಿಸಿದೆ. ಹೀಗೆ ನಿರ್ಲಕ್ಷಿತ ತಾಣಗಳಲ್ಲಿ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಇಟಗಿ ಗ್ರಾಮದ ದೇವಾಲಯ ಚಕ್ರವರ್ತಿ ಎಂದು ಬಿರುದಾಂಕಿತ ಮಹದೇವ ದೇಗುಲ ಪ್ರಮುಖವಾಗಿದೆ.

ಕರ್ನಾಟಕದ ಕೊಪ್ಪಳ ಜಿಲ್ಲೆಯು ಮೊದಲಿನಿಂದಲೂ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದೆ. ತುಂಗಭದ್ರಾ ನದಿಯ ತೀರಕ್ಕೆ ಸಮೀಪವಾಗಿರುವ ಕೊಪ್ಪಳ ಜಿಲ್ಲೆಯು ಕೋಪಣ ನಗರವಾಗಿ ಮೆರೆದಿತ್ತು. ಇದು ಹೈದರಾಬಾದಿನ ನಿಜಾಮನ ಆಡಳಿತಕ್ಕೂ ಒಳಪಟ್ಟ ನಾಡಾಗಿತ್ತು. ಈ ಜಿಲ್ಲೆಯಲ್ಲಿ ಸಿಂಧರ ವಂಶದ ದೊರೆಗಳು ಯರಂಬರ್ಗೆ (ಯಲಬುರ್ಗಾ) ವನ್ನು ಆಳುತ್ತಿದ್ದರು. ಈ ತಾಲೂಕಿನ ಹಲವಾರು ಸ್ಥಳಗಳಲ್ಲಿ ಪುರಾಣ ಪ್ರಸಿದ್ಧ ಮತ್ತು ಐತಿಹಾಸಿಕ ಪ್ರಸಿದ್ಧ ದೇವಾಲಯಗಳನ್ನು ನಾವು ಕಾಣಬಹುದಾಗಿದೆ. ಎಲ್ಲ ದೇವಾಲಯಗಳು ಶೋಭಾಯ ಮಾನವಾಗಿವೆ. ಇವೆಲ್ಲವುಗಳಿಗಿಂತ ಇಟಗಿಯ ಮಹೇಶ್ವರ ದೇವಾಲಯವು ಅತಿ ಪ್ರಸಿದ್ಧಿಯನ್ನು ಪಡೆದಿದೆ. ಶಾಸನದಲ್ಲಿ ಈ ಗ್ರಾಮಕ್ಕೆ "ವಿಟ್ಟಿಕಾ" ಇಂದು ಕರೆಯಲಾಗಿದೆ. ಚಾಲುಕ್ಯರ ಕಾಲದಲ್ಲಿ ಈ ಗ್ರಾಮ ಒಂದು ದೊಡ್ಡ ಅಗ್ರಹಾರವಾಗಿತ್ತೆಂದೂ ತಿಳಿದು ಬರುತ್ತದೆ. ಇಂಥ ಪವಿತ್ರ ಸ್ಥಳದಲ್ಲಿಯೇ ಮಹಾದೇವ ಮಂದಿರ ನಿರ್ಮಾಣಗೊಂಡು ತನ್ನದೇ ಆದ ಇತಿಹಾಸ ವನ್ನು ರೂಪಿಸಿಕೊಂಡಿದೆ.

ದೇವಾಲಯದ_ವಿಶಿಷ್ಟ_ಲಕ್ಷಣಗಳು

ಈ ದೇವಸ್ಥಾನಕ್ಕೆ ಬಳಸಿದ ಕಲ್ಲು ಈ ಭಾಗದಲ್ಲಿ ಲಭ್ಯವಿಲ್ಲದಿದ್ದರೂ, ಮಹದೇವ ದಂಡನಾಯಕ ಶ್ರಮವಹಿಸಿ, ಕಲ್ಲುಗಳನ್ನು ಬೇರೆಡೆಯಿಂದ ತರಿಸಿರುವುದಲ್ಲದೆ ಆಗಿನ ಕಾಲದಲ್ಲಿಯೇ ಕರ್ನಾಟಕದಲ್ಲಿ ಕಲ್ಲನ್ನು ಕತ್ತರಿಸುವ, ಕೊರೆಯುವ ವಿಧ ವಿಧಾನಗಳ, ಕೈಸಲಕರಣೆಗಳ ಬಳಕೆ ಈ ದೇವಸ್ಥಾನದ ನಿರ್ಮಾಣಕ್ಕೆ ಬಳಸಲಾಗಿದೆ

ಕೃಪೆ: ರವಿ ನವಲಹಳ್ಳಿ

ಪೂರ್ವಾಭಿಮುಖವಾಗಿ ಮೈದಳೆದು, ಶ್ರೀಮಂತಿಕೆಯಿಂದ ರಾರಾಜಿಸುತ್ತಿರುವ ಈ ದೇವಸ್ಥಾನದ ಪ್ರದೇಶ ಎತ್ತರದಲ್ಲಿದೆ. ಮೊದಲಲೆ ಕೆಳಹಂತದಲ್ಲಿ 300 ಅಡಿ ಅಗಲ, ಉದ್ದದ ಪುಷ್ಕರಣೆ ಇದೆ. ಈ ಕಲ್ಯಾಣಿಯನ್ನು ದೊರೆತ ಕಲ್ಲನ್ನೇ ಸುತ್ತಲೂ ಬಳಸಿ, ಒಂದು ಕೆರೆ ರೂಪ ನೀಡಿರುವುದು ದೇವಸ್ಥಾನದ ಶೋಭೆಗೆ ಕಾರಣವಾಗಿದೆ.

ದೇವಾಲಯವನ್ನು ನಿರ್ಮಾಣ ಮಾಡುವಾಗ ಚಾಲುಕ್ಯರು ಉಸುಕು ಮಿಶ್ರಿತ ಕೆಂಪು ಕಲ್ಲನ್ನು ಹೊರತುಪಡಿಸಿ, ಕಪ್ಪು ಮಿಶ್ರಿತ ನೀಲಿ ಛಾಯೆಯ ಬಳಪದ ಕಲ್ಲಿನ ಕ್ಲೋರೆಟಿಕ್‌ ಸಿಸ್ಟ್ ಕಲ್ಲು' ಉಪಯೋಗಿಸಿ, ಗಾಢ ಹಾಗೂ ಚಕ್ರಗಳಿಂದ ಕೆತ್ತಿ ಕಂಬಗಳನ್ನು ನಿರ್ಮಾಣ ಮಾಡುವುದರ ಜೊತೆಗೆ ಸೂಕ್ಷ್ಮ ಕೆತ್ತನೆಯ ಕೆಲಸವನ್ನೂ ಮಾಡಿದ್ದಾರೆ. ರತ್ನಾ ಭರಣಗಳಲ್ಲಿ ಕಂಡುಬರುವ ನಯ, ನಾಜೂಕತೆ ಯನ್ನು ಇವರು ನಿರ್ಮಿಸಿರುವ ದೇವಾಲಯಗಳ ದ್ವಾರಗಳಲ್ಲಿ ಕಾಣಬಹುದು. ದೇವಾಲಯದ ದ್ವಾರಗಳ ಅಕ್ಕಪಕ್ಕದಲ್ಲಿ ಕಲಾತ್ಮಕವಾದ ಪಟ್ಟಿಗಳು ಕಂಡುಬರುತ್ತವೆ. ಶಿಲ್ಪಿಯ ಕೈ ಚಳಕದಿಂದ ನಿರ್ಮಾಣಗೊಂಡಿರುವ ಚಿಕ್ಕ-ಚಿಕ್ಕ ಗೊಂಬೆಗಳನ್ನು ಶಿಲಾಬಾಲಿಕೆಯರ ಮೂರ್ತಿಗಳನ್ನು, ನಗಾರಿ, ಡೋಲು, ಡಮರುಗ ಮುಂತಾದವುಗಳನ್ನು ಹಿಡಿದು ನರ್ತಿಸುವ ಗೊಂಬೆಗಳನ್ನು ನಾವು ಕಾಣಬಹುದು.

ಚಾಲುಕ್ಯ ದೇವಾಲಯಗಳು ನಿರ೦ಧಾರ ಪ್ರಕಾರದವುಗಳು. ಇವುಗಳಲ್ಲಿ' ಏಕ ಕೋಟಿ ಹಾಗೂ ತ್ರಿಕುಟ' ದೇವಾಲಯಗಳು ನಿರ್ಮಾಣಗೊಂಡಿರು ಇವೆ. ಇಟಗಿಯ ಮಹಾದೇವ ಮಂದಿರವು ಬಹಳ ಕಲಾತ್ಮಕವಾಗಿದ್ದು, ನೋಡುಗರ ಮನಸ್ಸನ್ನು ಆಕರ್ಷಿಸುತ್ತದೆ. ದಂಡಾದಿಪತಿ ಮಹಾದೇವ ದಂಡ ನಾಯಕನು ಇದರ ನಿರ್ಮಾಣ ಕಾರ್ಯದ ಪ್ರಮುಖನು. ಇವನು ಶ್ರೀಮೂರ್ತಿ ನಾರಾಯಣ ಮತ್ತು ಚಂದ್ರಲೇಶ್ವರಿಯರ ಉದರದಿಂದ ಜನಿಸಿದನು. ಇವನು ಸಾಹಸಿಯೂ ಹೌದು, ಭಕ್ತಿ ಪ್ರಿಯನೂ ಹೌದು. ಮಹಾದೇವ ಮಂದಿರದ ಜೊತೆಗೆ ತಂದೆಯ ಸ್ಮರಣಾರ್ಥವಾಗಿ ಮೂರ್ತಿ ನಾರಾಯಣ ದೇವಾಲಯ ಮತ್ತು ತಾಯಿಯ ನೆನಪಿಗಾಗಿ ಚಂದಲೇಶ್ವರಿ ದೇವಾಲಯವನ್ನು ಕಟ್ಟಿಸಿದನು. ಅಲ್ಲದೆ ಸಾಹಸ ಭೈರವ ದೇವಾಲಯವನ್ನು ಇವನೇ ನಿರ್ಮಿಸಿದನು. ಎಂಟು ದಿಕ್ಕುಗಳಿಗೆ ಒಂದೊಂದು ಲಿಂಗ ಮಂಟಪ ಗಳನ್ನು ಕಟ್ಟಿಸಿ, ಅಷ್ಟ ದಿಗ್ಗಾಲಕರ ನೆನಪನ್ನು ತಂದು ಕೊಡುವ ಕೆಲಸವನ್ನು ಮಾಡಿರುತ್ತಾನೆ. ದೇವಾಲಯದ ಹಲವಾರು ಭಾಗಗಳಲ್ಲಿ ಕೋಷ್ಟಗಳನ್ನು ಕಾಣಬಹುದು. ಇವು ಬಹಳ ಸುಂದರವಾಗಿದ್ದು ಎಡ ಬಲದಲ್ಲಿ ಉತ್ತಮ. ರೀತಿಯ ಕೆತ್ತನೆಯ ಕೆಲಸದಿಂದ ಕೂಡಿದ ಗೋಪುರ ಸ್ಥ೦ಬಗಳನ್ನು ಹೊಂದಿವೆ.

ಕೃಪೆ: ರವಿ ನವಲಹಳ್ಳಿ

ದೇವಾಲಯದ_ಪರಿಚಯ

ಚಾಲುಕ್ಯ ಶೈಲಿಯ ದೇವಾಲಯವು ವಿಶೇಷ ಲಕ್ಷಣಗಳನ್ನು ಹೊ೦ದಿದೆ. ನಯವಾದ ಶ್ರೇಷ್ಠ ಗುಣಮಟ್ಟದ ಕಲ್ಲಿನಿ೦ದ ಈ ದೇವಾಲಯ ನಿರ್ಮಾಣಗೊಂಡಿದೆ. ಶಿಲೆಯ ಕೆತ್ತನೆಯ ಕೆಲಸವನ್ನು ಕಲೆಯ ಮಾಧುರ್ಯವನ್ನು ಶಿಲೆಯಲ್ಲಿ ಕೆತ್ತಿ ಉಳಿಸಿ ಹೋಗಿದ್ದಾರೆ. ಈ ದೇವಾಲಯ ತ್ರಿಕೂಟಗಳ ಮಾದರಿಯಲ್ಲಿ ನಿರ್ಮಾಣಗೊಂಡಿರುತ್ತದೆ. ಈ ದೇವಾಲಯಗಳು ಇಂದು ಐತಿಹಾಸಿಕ ಮತ್ತು ಧಾರ್ಮಿಕ ಕ್ಷೇತ್ರಗಳಾಗಿ ಪ್ರಸಿದ್ಧಿಯನ್ನು ಪಡೆದಿವೆ . ಕರ್ನಾಟಕದ ಇತಿಹಾಸದಲ್ಲಿ ಮಹೇಶ್ವರ ದೇವಾಲಯ ವಿಶಿಷ್ಟ ಸ್ಥಾನ ಪಡೆದಿದೆ.ಇದನ್ನು ನೋಡಿದ ಜನ ಕೆತ್ತನೆಯ ಕೆಲಸವನ್ನು ಮೆಚ್ಚಿ ಬರ ಗಾಗುವರು. ಮಹಾದೇವ ದೇವಾಲಯದಂತಹ ಬೇರೊಂದು ವಿಶ ದೇವಾಲಯವನ್ನು ಜಗತ್ ಸೃಷ್ಟಿಕರ್ತನಾದ ಬ್ರಹ್ಮ ನಿಗೂ ಸೃಷ್ಟಿಸಲು ಸಾಧ್ಯವಿಲ್ಲ. ಇದು ಪೂರ್ವಂ ಬ್ರಹ್ಮನ0 ನಿರ್ಮಿಸಲಗಿಯನಿದ೦ ಕರ್ಮನೇನಾದರೂ ಇಂತಹ ದೇವಾಲಯ ಕಟ್ಟಲು ಛಲ ತೊಟ್ಟರೆ ಮಂದಿರದ ಬಳಿ ಇದ್ದು ಕೆಲ ಕಾಲ ತರಬೇತಿ ಪಡೆಯ ಬೇಕಾಗುತ್ತದೆ ಎಂದು ಸೂಚ್ಯ ವಾರಿದರ್ಕಾನೆಯ ಮ್ಮಾನರ ಮಾಹೇಷ ಹೇಳಿದ್ದಾರೆ.

ಕೃಪೆ: ರವಿ ನವಲಹಳ್ಳಿ

ಈ ದೇವಾಲಯದ ಕಟ್ಟಡದಲ್ಲಿ ಶಿಲ್ಪಕಲೆಯ ಇಂದ್ರಜಾಲವೇ ಅರಳಿ ನಿಂತಿದೆ. ಗರ್ಭಗುಡಿ, ಅಂತರಾಳ, ನವರಂಗ, ಮುಖ ಮಂಟಪ, ಶುಖನಾಶಿ ಒಂದೊಂದು ಸುಂದರ, ಎಲ್ಲವೂ ಮನೋಹರ. ಯಾತ್ರಿಕ ಮನಸ್ಸನ್ನು ದೂರದಿಂದಲೇ ಸೆಳೆಯುತ್ತದೆ. ದೇವಾಲಯ 6 ಅಡಿಯ ಜಗುಲಿನ ಮೇಲೆ ನಿರ್ಮಾಣಗೊಂಡಿದೆ ಪೂರ್ವ ದಿಕ್ಕಿಗೆ ಮಹಾದ್ವಾರ ವನ್ನು ಹೊಂದಿದ್ದು, ದಕ್ಷಿಣೋತ್ತರವಾಗಿ ಒಂದೊಂದು ದ್ವಾರವನ್ನು ಹೊಂದಿರುತ್ತದೆ. ಉತ್ತರ ಮತ್ತು ದಕ್ಷಿಣ ದ್ವಾರಗಳ ಮುಂದೆ ಚಿಕ್ಕ ಚಿಕ್ಕ ಕೂಟ ಗಳು ಮನಮೋಹಕವಾಗಿರುತ್ತವೆ. ದ್ವಾರಗಳ ಎಡ ಬಲಕ್ಕೆ ದ್ವಾರ ಪೆಟ್ಟಿಕೆಗಳನ್ನು ಕೆತ್ತಲಾಗಿದೆ. ಇದರಲ್ಲಿ ಸುಳುವು, ಹೂಬಳ್ಳಿ, ಕೀರ್ತಿ ಮುಖಗಳನ್ನು ನೋಡಿ ದರೆ ಆನಂದ ಎನಿಸುತ್ತದೆ.

ಉತ್ತರ ದಿಶೆಯಲ್ಲಿ ದ್ವಾರವು ಸುಪ್ತ ಪಟ್ಟಿಕೆಗಳಿಂದ ಕೂಡಿದೆ. ಒಂದೊಂದು ಪಟ್ಟಿಕೆಯ ಕೆಳಭಾಗದಲ್ಲಿ ದ್ವಾರ ಪಾಲಕ್ಕಿರ ಮೂರ್ತಿಯನ್ನು ಕಾಣಬಹುದು. ಕೆಲವು ಪಟ್ಟಿಕೆ ಗಳಲ್ಲಿ ಸಂಗೀತ ಸಾಮಾಗ್ರಿ ಗಳನ್ನು ಹಿಡಿದು ನರ್ತಿಸುವ, ಡೋಲು, ಡಮರುಗಳನ್ನು ಹಿಡಿದು ಹೆಜ್ಜೆ ಹಾಕುವ ಶಿಲಾ ಮೂರ್ತಿಗಳನ್ನು ಕಾಣ ಬಹುದು. ಪಟ್ಟಿಕೆಯಲ್ಲಿ ಪತ್ರ ಲತೆ, ಲತಾ ಸುರಳಿಯನ್ನು ನೋಡಬಹುದು. ಈ ಎರಡೂ ದ್ವಾರದ ಮೇಲ್ಪತ್ತು ಅತೀ ಸುಂದರವಾಗಿದ್ದು, ಪದ್ಮಾಲಂಕಾರವಾಗಿ ನೋಡಗುರ ಮನಸ್ಸನ್ನು ಸೆಳೆಯುತ್ತದೆ. ಅಲ್ಲಲ್ಲಿ ಮಕರಗಳ ಬಾಯಿಂದ ಅಲಂಕಾರಗೊಂಡ ಸುರಳಿಗಳು ದ್ವಾರದ ಮೇಲಚ್ಚತ್ತು ತೋರಣ ಕಟ್ಟಿ ಕೀರ್ತಿ ಮುಖದವರೆಗೆ ಸಾಗಿದೆ. ದ್ವಾರದ ಎಡ ಬಲಭಾಗದಲ್ಲಿ ನಿರ್ಮಾಣಗೊಂಡ ಸುಖಾಸನಗಳು ಭಗ್ನಗೊಂಡಿವೆ. ಗೋಪುರದ ಉತ್ತರ ಭಾಗಕ್ಕೆ ಅಽಷ್ಠಾನದ ಮೇಲೆ ಚಿಕ್ಕ ಕೋಷ್ಠ ಇದ್ದು ಎಡ , ಬಲ ಭಾಗಗಳಲ್ಲಿ ಚಿಕ್ಕ ಕಂಭಗಳ ಮೇಲೆ ಕೋನಾಕಾರದ ಚಿಕ್ಕ ಗೋಪುರಗಳು ಸೂಕ್ಷ ಕೆತ್ತನೆಯಿಂದ ಕೂಡಿವೆ. ವೇಸರ ಶೈಲಿಯಲ್ಲಿ ನಿರ್ಮಾಣವಾದ ಈ ದೇವಾಲಯ ಹಿನಸರಿತ ಮತ್ತು ಮುನಸರಿತದಿಂದ ಕೂಡಿದೆ. ಕಪೋತ'ದ ಮೇಲ್ಬಾಗವು ನಕ್ಷಾತ್ರಾಕಾರ ವನ್ನು ಹೊಂದಿದೆ. ದೇವಸ್ಥಾನದ ಮೇಲ್ಬಾಗದಲ್ಲಿ ವಿಷ್ಣುವಿನ ಮೂರ್ತಿ ರಚಿತಗೊಂಡಿದೆ. ಗೋಪುರದ ಮೇಲ್ತುದಿಯವರೆಗೆ ನಾಲ್ಕು ಸ್ಥರಗಳಲ್ಲಿ ಚಿಕ್ಕ ಚಿಕ್ಕ ಕೋಕೋಷ್ಠಗಳು ನಿರ್ಮಾಣಗೊಂಡಿವೆ. ಪ್ರತಿ ಸ್ಥರದಲ್ಲಿ ಮಕರಗಳ ಬಾಯಿಂದ ಅಲಂಕೃತ ಲತಾಸುರುಳಿಗಳು ಕೀರ್ತಿ ಮುಖದವರೆಗೆ ಸಾಗಿದೆ. ಗೋಪುರದ ಹಿಂಭಾಗದಲ್ಲಿ ಮತ್ತೊಂದು ದೇವಕೋಷ್ಠ ಕೆತ್ತಲ್ಪಟ್ಟಿದ್ದು ಮೇಲ್ಬಾಗದಲ್ಲಿ - ಬ್ರಹ್ಮನ ಮೂರ್ತಿಯು ಕೆತ್ತಲ್ಪಟ್ಟಿದೆ. ಹಿಂಭಾಗದ ಕಪೋತದ ಮೇಲೆ ಶಿಲಾ ಬಾಲಕಿಯರ ಮೂರ್ತಿಗಳು ಕೆಲವು ಜಾಗಗಳಲ್ಲಿ ಭಗ್ನವಾಗಿದೆ. ಗೋಪುರದ ದಕ್ಷಿಣ ದಿಶೆಯಲ್ಲಿ ಕೆತ್ತನೆಗೊಂಡ ಕೋಷ್ಟದ ಮೇಲೆ ಶಿವನ ವಿಗ್ರಹವು ಕೆತ್ತನೆಯಾಗಿದೆ. ವಿಗ್ರಹವು ಕೈಯಲ್ಲಿ ತ್ರಿಶೂಲ ಮತ್ತು ಡಮರುಧಾರಿ ಯಾಗಿದೆ. ಉತ್ತರ ದಿಶೆಯ ಗೋಪುರದಂತೆ ಇದು ಸಹಿತ ಮಕರ ತೋರಣ ಕೀರ್ತಿ ಮುಖಗಳನ್ನು ಹೊಂದಿದೆ. 

ಉತ್ತರ ದಿಶೆಯಲ್ಲಿ ದ್ವಾರವು ಸುಪ್ತ ಪಟ್ಟಿಕೆಗಳಿಂದ ಕೂಡಿದೆ. ಒಂದೊಂದು ಪಟ್ಟಿಕೆಯ ಕೆಳಭಾಗದಲ್ಲಿ ದ್ವಾರ ಪಾಲಕ್ಕಿರ ಮೂರ್ತಿಯನ್ನು ಕಾಣಬಹುದು. ಕೆಲವು ಪಟ್ಟಿಕೆ ಗಳಲ್ಲಿ ಸಂಗೀತ ಸಾಮಾಗ್ರಿ ಗಳನ್ನು ಹಿಡಿದು ನರ್ತಿಸುವ, ಡೋಲು, ಡಮರುಗಳನ್ನು ಹಿಡಿದು ಹೆಜ್ಜೆ ಹಾಕುವ ಶಿಲಾ ಮೂರ್ತಿಗಳನ್ನು ಕಾಣ ಬಹುದು. ಪಟ್ಟಿಕೆಯಲ್ಲಿ ಪತ್ರ ಲತೆ, ಲತಾ ಸುರಳಿಯನ್ನು ನೋಡಬಹುದು. ಈ ಎರಡೂ ದ್ವಾರದ ಮೇಲ್ಪತ್ತು ಅತೀ ಸುಂದರವಾಗಿದ್ದು, ಪದ್ಮಾಲಂಕಾರವಾಗಿ ನೋಡಗುರ ಮನಸ್ಸನ್ನು ಸೆಳೆಯುತ್ತದೆ. ಅಲ್ಲಲ್ಲಿ ಮಕರಗಳ ಬಾಯಿಂದ ಅಲಂಕಾರಗೊಂಡ ಸುರಳಿಗಳು ದ್ವಾರದ ಮೇಲಚ್ಚತ್ತು ತೋರಣ ಕಟ್ಟಿ ಕೀರ್ತಿ ಮುಖದವರೆಗೆ ಸಾಗಿದೆ. ದ್ವಾರದ ಎಡ ಬಲಭಾಗದಲ್ಲಿ ನಿರ್ಮಾಣಗೊಂಡ ಸುಖಾಸನಗಳು ಭಗ್ನಗೊಂಡಿವೆ. ಗೋಪುರದ ಉತ್ತರ ಭಾಗಕ್ಕೆ ಅಽಷ್ಠಾನದ ಮೇಲೆ ಚಿಕ್ಕ ಕೋಷ್ಠ ಇದ್ದು ಎಡ , ಬಲ ಭಾಗಗಳಲ್ಲಿ ಚಿಕ್ಕ ಕಂಭಗಳ ಮೇಲೆ ಕೋನಾಕಾರದ ಚಿಕ್ಕ ಗೋಪುರಗಳು ಸೂಕ್ಷ ಕೆತ್ತನೆಯಿಂದ ಕೂಡಿವೆ. ವೇಸರ ಶೈಲಿಯಲ್ಲಿ ನಿರ್ಮಾಣವಾದ ಈ ದೇವಾಲಯ ಹಿನಸರಿತ ಮತ್ತು ಮುನಸರಿತದಿಂದ ಕೂಡಿದೆ. ಕಪೋತ'ದ ಮೇಲ್ಬಾಗವು ನಕ್ಷಾತ್ರಾಕಾರ ವನ್ನು ಹೊಂದಿದೆ. ದೇವಸ್ಥಾನದ ಮೇಲ್ಬಾಗದಲ್ಲಿ ವಿಷ್ಣುವಿನ ಮೂರ್ತಿ ರಚಿತಗೊಂಡಿದೆ. ಗೋಪುರದ ಮೇಲ್ತುದಿಯವರೆಗೆ ನಾಲ್ಕು ಸ್ಥರಗಳಲ್ಲಿ ಚಿಕ್ಕ ಚಿಕ್ಕ ಕೋಕೋಷ್ಠಗಳು ನಿರ್ಮಾಣಗೊಂಡಿವೆ. ಪ್ರತಿ ಸ್ಥರದಲ್ಲಿ ಮಕರಗಳ ಬಾಯಿಂದ ಅಲಂಕೃತ ಲತಾಸುರುಳಿಗಳು ಕೀರ್ತಿ ಮುಖದವರೆಗೆ ಸಾಗಿದೆ. ಗೋಪುರದ ಹಿಂಭಾಗದಲ್ಲಿ ಮತ್ತೊಂದು ದೇವಕೋಷ್ಠ ಕೆತ್ತಲ್ಪಟ್ಟಿದ್ದು ಮೇಲ್ಬಾಗದಲ್ಲಿ - ಬ್ರಹ್ಮನ ಮೂರ್ತಿಯು ಕೆತ್ತಲ್ಪಟ್ಟಿದೆ. ಹಿಂಭಾಗದ ಕಪೋತದ ಮೇಲೆ ಶಿಲಾ ಬಾಲಕಿಯರ ಮೂರ್ತಿಗಳು ಕೆಲವು ಜಾಗಗಳಲ್ಲಿ ಭಗ್ನವಾಗಿದೆ. ಗೋಪುರದ ದಕ್ಷಿಣ ದಿಶೆಯಲ್ಲಿ ಕೆತ್ತನೆಗೊಂಡ ಕೋಷ್ಟದ ಮೇಲೆ ಶಿವನ ವಿಗ್ರಹವು ಕೆತ್ತನೆಯಾಗಿದೆ. ವಿಗ್ರಹವು ಕೈಯಲ್ಲಿ ತ್ರಿಶೂಲ ಮತ್ತು ಡಮರುಧಾರಿ ಯಾಗಿದೆ. ಉತ್ತರ ದಿಶೆಯ ಗೋಪುರದಂತೆ ಇದು ಸಹಿತ ಮಕರ ತೋರಣ ಕೀರ್ತಿ ಮುಖಗಳನ್ನು ಹೊಂದಿದೆ.

ದಕ್ಷಿಣದ್ವಾರವು ಸಹ ಸಪ್ತ ಪಟಿಕೆಗಲಿಂದ ಅಲಂಕೃತವಾಗಿದೆ. ವಿವಿಧ ಭಾವ ಭಂಗಿಗಳಲ್ಲಿ ನರ್ತಿಸುವ ಕ ವ ಹೆಣ್ಣು ಗೊಂಬೆಗಳು, ನಂದಿ, ಅಶ್ವಸಿಂಹದ ಮೂರ್ತಿಗಳು ಕೆತ್ತಲ್ಪಟ್ಟಿವೆ. ಇವುಗಳ ಸುತ್ತಲೂ ಲತಾ ಸುರಳಿ ಕೆತ್ತಲಾಗಿದೆ. ಪೂರ್ವ ದಿಶೆಯಲ್ಲಿ ರಚಿತವಾದ ದ್ವಾರವು ನವಪಟ್ಟಿಕೆಗಳಿಂದ ಕೂಡಿದೆ. ಅಶ್ವ, ನಂದಿ, ಗಜ, ಸಿಂಹದ ಮೂರ್ತಿಗಳು, ನಾಗ-ನಾಗಿಣಿಯರ, ಯಕ್ಷ-ಯಕ್ಷಿಣಿಯರ ಮೂರ್ತಿಗಳನ್ನು ಬಹು ಸುಂದರವಾಗಿ ಕೆತ್ತಲಾಗಿದೆ. ದ್ವಾರದ ಮೇಲ್ಬಾಗ ದಲ್ಲಿ ಗಜಲಕ್ಷ್ಮಿಯ ಮೂರ್ತಿ ಖಂಡರ್ಷವಾಗಿರುತ್ತದೆ. ಇದೇ ದ್ವಾರದ ಎಡಭಾಗದ ಉತ್ತರ ದಿಕ್ಕಿನಲ್ಲಿ ಕಪೋತದ ಅಂಚಿನಲ್ಲಿ ಚಿಕ್ಕ ಕೋಷ್ಟದ ಮೇಲೆ' ಸಾಹಸ ಭೈರವನ ಮೂರ್ತಿ ರಚನೆಯಾಗಿದೆ. ಇವನ ಕೈಯಲ್ಲಿ ತ್ರಿಶೂಲ, ಪರಶು, ನಡಕ್ಕೆ ನಡಪಟ್ಟಿಯನ್ನು ಕಟ್ಟಿದೆ. ಮೊಣಕಾಲವರೆಗೆ ಪೋಷಾಕವನ್ನು ಧರಿಸಿ ತಲೆಯಲ್ಲಿ ಮುಂಡಾಸ ಧರಿಸಿದೆ. ಕೊರಳಿಗೆ ತೆಲೆಯನ್ನು ಹಾಕಿಕೊಂಡಿ ಮೂರ್ತಿಯು ಅತೀ ಸುಂದರವಾಗಿದೆ. ದೇವಾಲಯದ ಮಹಾ ದ್ವಾರವನ್ನು ದಾಟಿ ಮುಂದೆ ಬಂದರೆ ರಂಜಸಜ್ಜಿಕೆ ಇದೆ. ಇದಕ್ಕೆ ಚತುಷ್ಕ ಎಂದು ಕರೆಯುವರು. ಇದರ ಈಶಾನ್ಯ ದಿಕ್ಕಿನಲ್ಲಿರುವಾ ದ್ವಾರವನ್ನು ದಾಟಿ ಮುಂದೆ ಬಂದರೆ ಬೋದಿನ ಮೇಲೆ ಮಹಾದೇವ ದಂಡ ನಾಯಕನ ಕಂಡಕ ಮೂರ್ತಿಯನ ಕಾಣಬಹುದಾಗಿದೆ. ಚತುಷ್ಯದಲ್ಲಿ ರಚಿತವಾದ ಕಂಬಗಳ ಕೆಳಭಾಗದ ದ್ವಾರ ಪಾಲಿಕೆಯರ ಮೂರ್ತಿಗಳು ಪ್ರೇಕ್ಷಕರ ಮನಸ್ಸನ್ನು ಸೆಳೆಯುತ್ತವೆ. ದೇವಾಲಯದ ಗೋಪುರದ ಮೇಲ್ತುದಿ ಶಿಲಾರಹಿತವಾಗಿ ರಚನೆಯಾಗಿದೆ. ಇದರ ನಿರ್ಮಾಣ ಕಾರ್ಯವನ್ನು ಇತ್ತೀಚಿನ ಕಾಲದಲ್ಲಿ ಹೈದರಾಬಾದ್‌ನ ನಿಜಾಮನು ವ್ಯವಸ್ಥೆಗೊಳಿಸಿದ ನೆಂದು ತಿಳಿಯುತ್ತದೆ ಗೋಪುರದ ಮೇಲ್ತುದಿಗೆ ದೊಡ್ಡ ಕಳಸವಿದೆ.

ಮಹಾದೇವ ಮಂದಿರದ ಗರ್ಭಗುಡಿಯ ವಿವಿಧ ಭಾಗದಲ್ಲಿ ಕಲಾತ್ಮಕವಾದ ಚಿಕ್ಕ ಕೋಷ್ಟಗಳು ರಚಿತವಾಗಿದ್ದು, ನೋಡಲು ಆಕರ್ಷಣೀಯವಾಗಿದೆ. ಇವು ಚಿಕ್ಕ ಮಂದಿರಗಳಂತೆ ಕಾಣುತ್ತಿದ್ದು, ಕೋಷ್ಠದ ಮೇಲ್ಬಾಗದಲ್ಲಿ ಗಜಲಕ್ಷ್ಮಿ, ಸಂಪತ್ತು ಲಕ್ಷ್ಮಿ, ಧನಲಕ್ಷ್ಮಿ ಇನ್ನೂ ಹಲವಾರು ದೇವತೆಯ ಚಿತ್ರವನ್ನು ಕಾಣಬಹುದು. ಇದೇ ರೀತಿ ಕೋಷ್ಟದ ಎರಡೂ ಮಗ್ಗಲಿನ ಭಾಗವು ಬಳ್ಳಿ ಮತ್ತು ತೋರಣಗಳಿಂದ ಅಲಂಕೃತಗೊಂಡಿದೆ. ದೇವಾಲಯದ ದಕ್ಷಿಣ ದಿಕ್ಕಿನಲ್ಲಿ ಶ್ರೀ ಸರಸ್ವತಿ ಮಠ ಇರುತ್ತದೆ. ಈ ಸರಸ್ವತಿ ಮಠದಲ್ಲಿರುವ 93 ಸಾಲುಗಳುಳ್ಳ ಶಾಸನವು ಕಲ್ಯಾಣ ಚಾಲುಕ್ಯರ ವರ್ಣನೆಯನ್ನು ಮಾಡುತ್ತದೆ. ಇದೇ ಸ್ಥಳದಲ್ಲಿ ಪೂರ್ವ ಮತ್ತು ಪಶ್ಚಿಮ ದಿಕ್ಕುಗಳಲ್ಲಿ ಎರಡು ಗುಹೆಗಳಿದ್ದು, ಸುಮಾರು 40 ರಿಂದ 50 ಜನರು ಕೂಡುವಷ್ಟು

ಅವಕಾಶವನ್ನು ಹೊಂದಿವೆ. 

ಶಾಸನದ ಶಿಲೆ 8ಫೂಟ್, 10 ಇಂಚು ಎತ್ತರವಿದೆ. ಶಾಸನವನ್ನು ಬರೆದ ಅಗಲ 5ಫೂಟ್ ಆಗಿರುತ್ತದೆ. ಶಾಸನದ ಬಳಕೆ 6ಫೂಟ್, 8 ಇಂಚು ಆಗಿರುತ್ತದೆ. ಈ ಶಾಸನ ಉತ್ತಮ ರಕ್ಷಣೆಯಲ್ಲಿ ಇದೆ ಶಾಸನ ಸಾಲು 76ತರಲ್ಲಿ ಚಾಲುಕ್ಯ ರಾಜನ ಅವದಿಯಲ್ಲಿಯೇ ರಾಜ್ಯಾಡಳಿತದ ಮತ್ತು ದೇವಾಲಯಗಳ ನಿರ್ಮಾಣ ಕಾರ್ಯದ ಸ್ಥಿತಿ-ಗತಿಗಳ ಬಗ್ಗೆ ಈ ರೀತಿ ವರ್ಣನೆ ಮಾಡುತ್ತದೆ.

“ಶಾ.ಸಾ. 76।। ಶ್ರೀಮನ ಮಹಾ ಅಗ್ರಹಾರ ವಿಟ್ಟಿಗೆಗೆಯಗಿದೆ ಆಥೇಯ ಪ್ರಮುಖದ ಶ್ರೇಷ್ಟ ಮಹಾ ಜನರು ನಾಲ್ಕೂವರ್ ಕೈಯಲು ದ್ರವ್ಯ, ಧಾನ್ಯ, ಪೂರ್ವದಿಂ ಸಾರ್ವನ ವಸರ್ವ ಭಾದಾ ಪರಿಹಾರವಾಗಿ ಪಡೆದು ಶ್ರೀಮತ್ ಚಾಲುಕ್ಯ ವರ್ಷ 37ನೇಯ ನಂದನ ಸಂವತ್ಸರದ ಭಾದ್ರ ಪದ ಪೂರ್ಣಿಮೆ ಆದಿತ್ಯವಾರ ಸೋಮ ಗ್ರಹಣ ಸಂಕ್ರಾಂತಿ ವ್ಯತಿ ಪಾತದಂದು"

ಶಾ.ಸಾ .77।। ಶ್ರೀಮಾನ್ ಮಹಾದೇವೇಶ್ವರ ದೇವರ ಅಂಗಭೋಗ ನೈವೇದ್ಯ ಅನ್ನದಾನ, ಭಕ್ತವೃತ್ತಿ, ಫಣಿಯಾರ, ಧಾತ್ರ ನಾವುಗಳ ಪ ದೋರಿಗ್ರಹಕ್ಕೆ ಧಾರಾಪೂರ್ವಕವಾಗಿಬಿಟ್ಟ. "ಇದರ ಶುದ್ಧ ಭಾಷೆ, ಅಲಂಕಾರಿಕ ಶೈಲಿ ಹಾಗೂ ರಮ್ಯ ವರ್ಣನೆಯ ಚಿತ್ರ ಇರುವುದರಿಂದ ಈ ಶಾಸನವನ್ನು ಒಂದು ಚಿಕ್ಕ ಖಂಡ ಕಾವ್ಯವೆಂದೆಣಿಸ ಬಹುದು. ಬೆಳ್ಳಲ ನಾಡಿನ ಇಟಗಿಯ ವರ್ಣನೆ ವಿಕ್ರಮಾದಿತ್ಯನನ ಪರಾಕ್ರಮ, ದೇವಾಲಯದ ವರ್ಣನೆ, ಹೆಸರಾಂತ ಕವಿಗಳ ಕವಿಶ್ವ ಪ್ರೌಢಿಮೆ ಕಂಡುಬರುತ್ತದೆ.

ಕೃಪೆ: ರವಿ ನವಲಹಳ್ಳಿ

ಮಹಾದೇವ ಮಂದಿರದ ಪೂರ್ವ ದಿಕ್ಕಿಗೆ ಮುಖಮಂಟಪ ಶೋಭಿಸುತ್ತದೆ. ಈ ಮುಖಮಂಟಪಕ್ಕೆ ಹಲವಾರು ಕಂಬಗಳು ಆಧಾರವಾಗಿರುತ್ತವೆ. ಒಟ್ಟು 42 ಕಂಭಗಳು ಮುಖ ಮಂಟಪವನ್ನು ಎತ್ತಿ ಹಿಡಿದಿದ್ದವೆ ಮಂದಿರದ ಮುಖ ಮಂಟಪವನ್ನು ಪ್ರವೇಶಿಸಿ ಮೇಲ್ಕತ್ತನ್ನು ನೋಡಿದಾಗ ನಟರಾಜಾನವಾಗಿ ಕಂಗೊಳಿಸುತ್ತದೆ. ಈ ಮೂರ್ತಿಯ ಕೆಲಭಾಗ ಭಿನ್ನಗೊಂಡಿದ್ದು,ಭಂಗಿಗಳ ಮೂರ್ತಿಗಳು ಸುತ್ತಲೂ ವಿವಿಧ ಭಾಗ ಭಂಗಿಗಳ ಮೂರ್ತಿಗಳ ಕಂಡುಬರುತ್ತವೆ ಮಹದೇವ ದಂಡನಾಯಕನ ವಂಶಾವಳಿಯು ಇಲ್ಲಿ ದೊರೆಯುತ್ತದೆ. ತದನಂತರ ಮುಂದೆಸಾಗಿದರೆ,

ದೇವಸ್ಥಾನದ ಎದುರಿಗೆ ನಂದಿ ವಿಗ್ರಹವು ಮಹೇಶ್ವರನ ಎದುರಿಗೆ ಪಶ್ಚಿಮ ದಿಕ್ಕಿಗೆ ಮುಖ ಮಾಡಿ ಪವಡಿಸಿರುತ್ತದೆ. ನಂದಿ ವಿಗ್ರಹವು ಬಳಪದ ಕಲ್ಲಿನಿಂದ ನಿರ್ಮಾಣಗೊಂಡಿದ್ದು, ಆದರ ಕೆಲವು ಭಾಗ ಭಗ್ನವಾಗಿರುತ್ತದೆ. ಕೊರಳಿಗೆ ಗೆಜ್ಜೆಸರ, ಹಣೆಗೆ ಹಣೆಕಟ್ಟು, ಮಣಿಹಾರ ಮತ್ತು ಇಣಿಯಾ ಹಿಂಭಾಗದಲ್ಲಿ ಗುಮರೆ ಸರಗಳಿಂದ. ಶೃಂಗಾರಮಯವಾಗಿದೆ. ಇದೇ ನಂದಿ ವಿಗ್ರಹದ ಸುತ್ತಲೂ ಆವೃತ್ತಗೊಂಡ ಕಂಭಗಳು, ಚಕ್ರಕಂಭಗಳು ಮತ್ತು ದುಂದುಕಂಭಗಳು ತಳದಿಂದ ಮೇಲ್ತುದಿಯವರೆಗೆ ಚಕ್ರಾಕಾರವಾಗಿರುತ್ತವೆ. ಇವುಗಳ ತಳಭಾಗದ ನಾಲ್ಕೂಕಡೆಗೂ ಸೌಂದರ್ಯಮಯ ಶಿಲಾಬಾಲಿಕೆಯರ ವಿಷ್ಣುವಿನ ಶಿವನ ಶಿಲಾಮೂರ್ತಿಗಳು ಕಾಣುತ್ತವೆ. ಬೆಳ್ಳಿ ಬಂಗಾರದಿಂದ ಆಭರಣ ತಯಾರಿಸುವ ಮಾದರಿ ಯಲ್ಲಿ ರಚಿಸಲಾದ ಕಂಭಗಳಲ್ಲಿ ಕುಸುರಿನ ಕೆಲಸ ನೋಡಗುರ ಮನವನ್ನು ಸೆಳೆಯುತ್ತದೆ.

ಈ ಚಕ್ರಗಂಭದ ಚಿತ್ರವನ್ನು ನೋಡಿದರೆ ಮನ ಅರಳಿ ಹೂವಾಗುತ್ತದೆ. ಇಲ್ಲಿ ಶಿಲ್ಪ ಕಲ್ಲನ್ನು ಮೇಣದಂತೆ ಬಳಸಿ ತನ್ನ ಕೈಚಳಕವನ್ನು ತೋರಿಸಿ ಗುಡಿಯ ಸೌಂದರ್ಯಕ್ಕೆ ಕಾರಣ ಪುರುಷನಾಗಿದ್ದಾನೆ. ದುಂಡುಗಂಭಗಳ-ಮಧ್ಯಭಾಗದಲ್ಲಿ ಬೆಳ್ಳಿಯ ಗೆಜ್ಜೆಪಟ್ಟಿಯ ಆಕಾರದಲ್ಲಿ ಸುತ್ತಲೂ ಕೆತ್ತನೆಯ ಕೆಲಸ ಮಾಡಿ, ಕಲೆಯ ಸಿರಿಯನ್ನೇ ಭೂಮಿಗೆ ತಂದು ಮಂದಿರದ ಮೆರಗನ್ನು ಹೆಚ್ಚಿಸಿರುತಾನೆ. 

ಕೃಪೆ: ರವಿ ನವಲಹಳ್ಳಿ

ಮಹಾದ್ವಾರವನ್ನು ದಾಟಿ ಮುಂದೆ ಸಾಗಿದಾಗ ಯಾತ್ರಿಕರಿಗೆ ನವರಂಗದ ದರ್ಶನ ವಾಗುತ್ತದೆ. ನವರಂಗದ ಸುತ್ತಲೂ ನಾಲ್ಕು ದುಂಡು ಗಂಭಗಳು ಶಿಲ್ಪಕಲೆಯ ಚಾತುರ್ಯತೆಯಿಂದ ನಿರ್ಮಾಣ ಗೊಂಡಿದೆ. ಈ ಕಂಭಗಳ ಕೆಳಭಾಗದಲ್ಲಿಯೂ ವಿಷ್ಣುವಿನ ಹಾಗೂ ಶಿಲಾಬಾಲಕಿಯರ ಮೂರ್ತಿಗಳು ಕಂಗೊಳಿಸುತವೆ. ಇವು ತೀಡಿ ಮಾಡಿದ ಗೊಂಬೆಗಳು, ಹೂಬಳ್ಳಿಗಳುಮತ್ತು ತಾಳ ಮದ್ದಲೆಯೊಂದಿಗೆ ಕುಣಿಯುವ ಚಿತ್ರಗಳನ್ನು ಕಂಡಾಗ ನಮಗೂ ಕುಣಿಯ ಬೇಕೆಂದೆನಿಸುತ್ತದೆ. ಈ ಸ್ತಂಭಗಳು ಎರಡಡಿಗಿಂತಲೂ ಚಿಕ್ಕ ದಾದ ಚೌಕಾಕಾರದ ಪೀಠದ ಮೇಲೆ ನಿಂತಿವೆ. ಈ ಕಂಭಗಳಲ್ಲಿಯೂ ಮಣಿಹಾರ, ಪತ್ರ ಲತೆ, ಲತಾ ಸುರಳಿಗಳನ್ನು ಕಾಣಬಹುದು. ಇವುಗಳು ಮೀರಿ ಮೀರಿ ಹೊಳೆಯುತ್ತಿದ್ದು ಅತ್ಯಂತ ನುಣುಪಾಗಿದೆ.

ನವರಂಗದ ಮಧ್ಯೆನಿಂತು ಕತ್ತೆತ್ತಿ ದೃಷ್ಟಿಯನ್ನು ಹರಿಸಿದಾಗ, ಎರಡೇ ಎರಡು ಸ್ತಂಭಗಳ ಮೇಲೆ ಒಂದು ಏಕ ಶಿಲೆಯು ಅಲಂಕಾರಿಕ ಚಿತ್ರಗಳಿಂದ ರೂಪಗೊಂಡಿದೆ. ಇಲ್ಲಿ ಬ್ರಹ್ಮ, ವಿಷ್ಣು, ಶಿವನ ಮೂರ್ತಿಗಳನ್ನು ಕಾಣುತ್ತೇವೆ. ಇದಕ್ಕೆ "ಮಕರ ತೋರಣ" ಎಂದು ಹೆಸರು. ಇದರಲ್ಲಿ ಗಜ ಚಿತ್ರ ವಿವಿಧ ಉಡುಗೊರೆಗಳನ್ನು ತೊಟ್ಟು ಕುಣಿಯುವ ಕಟಿಬಂಧ, ಉದರ ಬಂಧ, ಕರಣ ಕುಂಡಲ ಕಾಲ್ಗಡಗಗಳನ್ನು ಧರಿಸಿದ ಚಿತ್ರಗಳು ಕೆತ್ತಲ್ಪಟ್ಟಿವೆ.

ಈ ಮಕರ ತೋರಣವನು ದಾಟಿ ಮುಂದೆಸಾಗಿದರೆ ಗರ್ಭಗುಡಿಯಿದೆ. ಆದರೆ ಮಹಾದ್ವಾರವು ಅಲಂಕಾರಿಕ ಚಿತ್ರಗಳ ಜಾಲಂದರ, ಪಟ್ಟಿಕೆಗಳನ್ನು ಹೊಂದಿದೆ. ಈ ದ್ವಾರ ಕುಸುರಿನ ಪಂಚ ಪಟ್ಟಿಕೆಗಳನ್ನು ಹೊಂದಿದ್ದು, ಸುಮಾರು ಪಟ್ಟಿಕೆಗಳು 4-5 ಇಂಚು ಅಗಲವಾಗಿವೆ. ಇದರಲ್ಲಿ ನೃತ್ಯ ಹಾಗೂ ಸಂಗೀತ ಮೇಳಗಳು, ತಾಳ ತಮ್ಮಟಿ ಮದ್ದಲಿಯನ್ನು ಹಿಡಿದು ಕುಣಿಯುವ ಸಂಸ್ಕೃತಿಯ ಪರಂಪರೆಯ ಚಿತ್ರಗಳು, ಆರತಿ ಪಡಿಯಚ್ಚಿನಲ್ಲಿ ಕೆತ್ತಿದಂತೆ ಸುಂದರವಾಗಿ ಕೆತ್ತಲ್ಪಟ್ಟಿದೆ. ಹೊಸ್ತಿಲದ ತಮ್ಮಟ, ಎಡಬದಿಯಲ್ಲಿ ಶಂಖ ಮತ್ತು ಚಕ್ರಗಳ ಚಿತ್ರಗಳನ್ನು ಕೆತ್ತಲಾಗಿದೆ. ಮುಂದೆ ಕಣ್ಣರಳಿಸಿ ನೋಡಿದರೆ ಮಹೇಶ್ವರನ ಮೂರ್ತಿ ಕಂಗೊಳಿಸುತ್ತದೆ. ಮೂರ್ತಯ ಎದುರು ಚಿಕ್ಕದಾದ ನಂದಿ ಪವಡಿಸಿದೆ.

ಮಹಾದೇವ ದಂಡನಾಯಕನು ಮಹಾದೇವ ಮಂದಿರದ ಉತ್ತರ ದಿಸೆಯಲ್ಲಿ ತಂದೆಯ ಸ್ಮರಣಾರ್ಥವಾಗಿ 'ಮೂರ್ತಿ ನಾರಾಯಣ'ಮತ್ತು ತಾಯಿ 'ಚಂದಲೇಶ್ವರಿ'ಯರ ಸ್ಮರಣಾರ್ಥವಾಗಿ ಚಂದಲೇಶ್ವರಿ ದೇವಾಲಯವನ್ನು ನಿರ್ಮಾಣ ಗೊಳಿಸಿದ್ದಾನೆ. ಅವುಗಳ ಮುಂಭಾಗದಲ್ಲಿ ಸಾಹಸ ಭೈರವ ದೇವಾಲಯವನ್ನು ಕಟ್ಟಿಸಿದ್ದಾನೆ. ಅದರ ಜೀರ್ಣೋದ್ಧಾರ ಕೆಲಸ ನಡೆಯಬೇಕಾಗಿದೆ. ದೇವಾಲಯದ ಹಲವಾರು ಕಡೆ ಲಿಂಗ ಮಂಟಪಗಳಿದ್ದು, ಆನ್ನೇಯ ದಿಕ್ಕಿನನಲ್ಲಿ ಬಹಳಷ್ಟು ಭಗ್ನಗೊಂಡ ಒಂದು ಉತ್ತಮ ರಂಗ ಸಜ್ಜಿಕೆಯಿಂದ ನಿರ್ಮಾಣಗೊಂಡ ಕಟ್ಟಡವಿದೆ. ಪ್ರಾಚ್ಯವಸ್ತು ಇಲಾಖೆಯವರು ಇದನ್ನು ' ಡ್ಯಾನ್ಸಿಂಗ್ ಹಾಲ್ ' (ನೃತ್ಯ ಶಾಲೆ) ಎಂದು ಗುರುತಿಸಿದ್ದಾರೆ. ಇದು ವಿಶಾಲವಾಗಿದ್ದು, ಕಟ್ಟಡದ ಮೇಲಿನ ಚತ್ತು ಸ್ವಲ್ಪ ಬಿದ್ದು ಹೋಗಿದೆ. ರಾಜಾಶ್ರಯ ಪಡೆದ ನರ್ತಕಿಯರು ಇಲ್ಲಿ ನೃತ್ಯದ ಪ್ರದರ್ಶನವನ್ನು ಮಾಡುತ್ತಿದ್ದರೆಂದು ತಿಳಿದು ಬರುತ್ತದೆ. ದೇವಾಲಯದ ಪಶ್ಚಿಮ ದಿಕ್ಕಿನಲ್ಲಿ ಜಲಭರರಿತ ಕಿಲ್ಗೊಂಡ ' ಎಂಬ ಹೆಸರು ಪಡೆದ ಭಾವಿ ನಿರ್ಮಾಣಗೊಂಡಿದೆ ₹. ಈ ಕಿಲ್ಗೊಂಡದಿಂದಲೇ ಮಹೇಶ್ವರ ಅರ್ಚನೆಯ ಸಲುವಾಗಿ ಪೂರೈಕೆಯಾಗುತ್ತಿತ್ತೆಂದು ತಿಳಿಯುತ್ತದೆ. ಭೀಕರ ಬರಗಾಲದಲ್ಲಿಯೂ ಬತ್ತದಂಥ ಈ ಬಾವಿಯಲ್ಲಿ ಜಲವು ಧಾರಾಳವಾಗಿ ತುಂಬಿ ಹರಿಯುತ್ತಿತ್ತೆಂದು ತಿಳಿದಿದೆ. ಇಂದಿಗೂ ಇದು ಬತ್ತಿರುವುದಿಲ್ಲ. ಇದರ ತಳ ವಿನ್ಯಾಸ ತೊಟ್ಟಿಲಿನಂತೆ ಇದ್ದು, ಗೋಪುರದ ತುದಿಯ ಸುತ್ತಳತೆಯ ಸಮನಾಗಿದೆ. 

ಕೃಪೆ: ರವಿ ನವಲಹಳ್ಳಿ

ಮಂದಿರದ ಮುಂಭಾಗಕ್ಕೆ ನೀರಿನ ರಾಶಿಯನ್ನೇ ಹೊತ್ತಿರುವ 10-12 ಫರ್ಲಾಂಗ್ ಉದ್ದದ ' ಶಿವತೀರ್ಥ' ಅಥವಾ ಪುಷ್ಕರಣೆ ಇದೆ. ದೇವಗಂಗೆ ನಿರಂತರವಾಗಿ ಹರಿದು ಇಲ್ಲಿ ನೆಲೆಸಿದಳಂತೆ. ಮೋಡಗಳು ಈ ಪುಷ್ಕರಣಿಯ ಮೇಲ್ಬಾಗದಲ್ಲಿ ಬಂದು ನಿಂತು ನೀರನ್ನು ಸುರಿದು ಹರ್ಷೋದ್ದಾರ ಉಂಟು ಮಾಡುತ್ತಿದ್ದವೆಂದು ಶಾಸನದ ಸಾಲುಗಳು ಹೇಳುತ್ತವೆ. ಈ ಬೇಳ್ವಲದ ಫಲವತ್ತಾದ ಭೂಮಿ ಸುತ್ತ ಮುತ್ತ ತೋಟ ಪಟ್ಟಿಗಳಿಂದ ನಗರದ ಶೋಭೆಯನ್ನು ಹೆಚ್ಚಿಸಿ, ಪ್ರಕೃತಿಯ ಫಲವೃತ್ತವಾಗಿತ್ತು. ಆಕರ್ಷಿತನಾದ ದೇವೇಂದ್ರನು ಇಲ್ಲಿಯ ನಂದನವನಗಳಿಂದ ಅಗಿಗಳನ್ನು ತರಿಸಿ, ಅಮರಾವತಿಯ ತನ್ನ ಉಪವನದಲ್ಲಿ ನೆಡುವ ಆಸೆ ತಳೆದಿದ್ದನಂತೆ ಎಂದು ವರ್ಣಿಸುವ ಮಾತು ಶಾಸನ ಸಾಲಿನಲ್ಲಿ ಬರುತ್ತದೆ. ಕವಿ ಒಂದು ಕಡೆ ಈ ರೀತಿಯಾಗಿ ವರ್ಣಿಸಿ ಆನಂದಿಸುತ್ತಾನೆ. ಅದೇ ನೆಂದರೆ "ದೇವಾಲಯದ ಕಲೆಯು ತಲೆಯೊಡೆದು ನಾಡಿನ ದಿಗಂತಗಳಲ್ಲಿ ಹರಿದು ಜನಮನಗಳನ್ನು ಸ್ಪರ್ಶಿಸಿ ಆನಂದವನ್ನುಂಟು ಮಾಡಿದರೆ ದೇವಾಲಯ ಕೆತ್ತಿದ ವಿಲ್ಪಿಯ ಆತ್ಮಕ್ಕೆ ಶಾಂತಿ ಸಿಗುತ್ತದೆ" .ಚಿರಶಾಂತಿಯು ನಿನ್ನ ಆತ್ಮಕ್ಕೆ ಓ ಕಲೆಗಾರ ಬರಿ ಶಿಲೆಯಲ್ಲ ಇದು ವಿಟಿಕೆಯು ಕಲೆಯ E ಆಗರ ನೋಡಾ ಕೈ ಮಾಡಿ ಕರೆಯುತಿದೆ ನಿನ್ನನು ಸ್ಪಂದಿಸಲೆಂದು ನನ್ನ ವೀಕ್ಷಿಸಿ ನೀನು ಆನಂದಿಸು ಎಂದು". ಈ ಕವಿ ವಾಣಿಯಂತೆ ದೇವಾಲಯದಲ್ಲಿ ರೂಪುಗೊಂಡಿರುವ ಶಿಲಾಮೂರ್ತಿಗಳು ದೇಶ - ವಿದೇಶಗಳಿಂದ ಜನರನ್ನು ಆಕರ್ಷಿಸಿ ಪ್ರದರ್ಶನಗೊಳ್ಳುತ್ತಲಿವೆ. ಜಗತ್ತಿನ ನಾನಾ ಮೂಲೆಗಳಿಂದ ಜನರು ಬಂದು ದೇವಾಲಯವನ್ನು ಕಂಡು ಕಲಾತ್ಮಕ ಹಾಗೂ ಕುಸುರಿನ ಶಿಲ್ಪಕಲೆಯನ್ನು ಕಂಡು ಆನಂದಿಸಿ, ನಕ್ಕು ನಲಿದು, ಹಾಡಿದ ಹರಸಿ ಹೋಗುತ್ತಾರೆ.

.    .    .

ಅಭಿನವ ಪಂಪ ನಾಗಚಂದ್ರ abhinava pampa nagachandra ರಾಮಚಂದ್ರ ಚರಿತ ಪುರಾಣಂ ಮಲ್...


ಅಭಿನವ ಪಂಪ ನಾಗಚಂದ್ರ,ಕನ್ನಡ ಸಾಹಿತ್ಯ ಚರಿತ್ರೆ, FDA,SDA ... ಪ್ರಾಚೀನ ಜೈನ ಕವಿ ಅಭಿನವ ಪಂಪ ನಾಗಚಂದ್ರ ಕವಿ ನಾಗಚಂದ್ರ : ಅಭಿನವ ಪಂಪ ನಾಗಚಂದ್ರ ಕವಿಯ ಪಂಪರಾಮಾಯಣ Ramachandra Charitha Puraana Nagachandra kavi parichaya. ನಾಗಚಂದ್ರ ಕವಿ ಪರಿಚಯ

ಅರ್ಥಾಲಂಕಾರಗಳು ಹಳಗನ್ನಡ ಸಾಹಿತ್ಯ ಅಲಂಕಾರ ಅರ್ಥ, ವಿಧಗಳು & ಉದಾಹರಣೆಗಳು Alankar...


ಅಲಂಕಾರಗಳು: ಅರ್ಥಾಲಂಕಾರ (Alankaragalu: Arthaalankara)
ಅರ್ಥಾಲಂಕಾರಗಳು; ೧.೪ ಉಪಮಾಲಂಕಾರ; ೧.೫ ರೂಪಕಾಲಂಕಾರ; ೧.೬ ಅರ್ಥಾಂತರನ್ಯಾಸಾಲಂಕಾರ ...
Alankaragalu Kannada Grammar
ಅರ್ಥಾಲಂಕಾರಗಳು · ಉಪಮಾಲಂಕಾರ · ದೀಪಕಾಲಂಕಾರ · ರೂಪಕಾಲಂಕಾರ · ಉತ್ಪ್ರೇಕ್ಷಾಲಂಕಾರ · ಅರ್ಥಾಂತರನ್ಯಾಸ ಅಲಂಕಾರ · ಅತಿಶಯೋಕ್ತಿ ಅಲಂಕಾರ · ಶ್ಲೇಷಾಲಂಕಾರ
ಅರ್ಥಾಲಂಕಾರಗಳು : ಅರ್ಥದ ಮೂಲಕ ಕಾವ್ಯದ ಸೊಬಗನ್ನು ಹೆಚ್ಚಿಸುವುದು. ಇದರಲ್ಲಿ ಎಂಟು ಪ್ರಮುಖ ಅಲಂಕಾರಗಳಾದ - ಉಪಮೆ, ದೀಪಕ, ರೂಪಕ, ಉತ್ಪ್ರೇಕ್ಷೆ, ಅರ್ಥಾಂತರನ್ಯಾಸ, ಶ್ಲೇಷೆ, ಅತಿಶಯೋಕ್ತಿ ಮತ್ತು ಸ್ವಭಾವೋಕ್ತಿಗಳು.

ವಾಸ್ತವವಾಗಿ ಅಲಂಕಾರವನ್ನು ಮೂರು ವಿಧಗಳಾಗಿ ವಿಂಗಡಿಸಲಾಗಿದೆ.

೧.ಅಲಂಕಾರ ಪ್ರಸ್ಥಾನ : ಒಂದು ಕಾವ್ಯದಲ್ಲಿ ಅಲಂಕಾರವೇ ಪ್ರಮುಖವಾಗಿರುವುದು.

.ಶಬ್ದಾಲಂಕಾರಗಳು : ಶಬ್ದಗಳ ಮೂಲಕ ಕಾವ್ಯದ ಸೊಬಗನ್ನು ಹೆಚ್ಚಿಸುವುದು. (ಬಲ್ಲವನೇ ಬಲ್ಲ ಬೆಲ್ಲದ ರುಚಿಯ) ಇದರಲ್ಲಿ ಪ್ರಮುಖವಾಗಿ ಅನುಪ್ರಾಸ , ಯಮಕ ಮತ್ತು ಚಿತ್ರಕವಿತ್ವಗಳ ಬಗ್ಗೆ ಹೇಳಲಾಗುತ್ತದೆ.

೩.ಅರ್ಥಾಲಂಕಾರಗಳು : ಅರ್ಥದ ಮೂಲಕ ಕಾವ್ಯದ ಸೊಬಗನ್ನು ಹೆಚ್ಚಿಸುವುದು.  ಇದರಲ್ಲಿ ಎಂಟು ಪ್ರಮುಖ ಅಲಂಕಾರಗಳಾದ - ಉಪಮೆ, ದೀಪಕ, ರೂಪಕ, ಉತ್ಪ್ರೇಕ್ಷೆ, ಅರ್ಥಾಂತರನ್ಯಾಸ, ಶ್ಲೇಷೆ, ಅತಿಶಯೋಕ್ತಿ ಮತ್ತು ಸ್ವಭಾವೋಕ್ತಿಗಳು.

  • ಯಮಕ : ಮೂರು ಅಥವಾ ಅದಕ್ಕಿಂತ ಹೆಚ್ಚಿನ ಅಕ್ಷರಗಳುಳ್ಳ ಪದ, ಒಂದು ಪದ್ಯದ ಆದಿ, ಮಧ್ಯ, ಅಂತ್ಯದಲ್ಲಿ ನಿಯತವಾಗಿ ಪುನಃ ಪುನಃ ಬಂದರೆ ಅದಕ್ಕೆ ಯಮಕ ಎನ್ನುತ್ತಾರೆ.

          ಉ.ದಾ –

          ‘ಬರಹೇಳ್ ನಿಕುಂಭನಂ ಶುಂಭನಂ ಜಂಭನಂ
           ಬರಹೇಳ್ ಸಬಲನಂ ಪ್ರಬಲನಂ ಸುಬಲನಂ
           ಬರಹೇಳ್ ಮಾಹ ನಂಭನಂ’

  • ದೀಪಕಾಲಂಕಾರ - ಪ್ರಸ್ತುತ ಮತ್ತು ಅಪ್ರಸ್ತುತ ವಸ್ತುಗಳ ವ್ಯಕ್ತಿಗಳು ಒಂದೇ ಎಂದು ವರ್ಣಿಸುವುದು

          ಉದಾ-

         ‘ಗಿಳಿಮರಿ ನೆರೆಯದ ನಂದನ ವಳಿಸಿಸು ವಿಹರಿಸು ಪೂಗಳ ಕಳವರದಿಂ

         ದೆಳೆಯಂಚೆಡಿಯಿಡದ ತಣ್ಬುಳ್ಳಿ ಬರ್ಬರ ನಾಡದ ದಂಗಳಂ ಮಂಜುಳ ಮಲ್ಲಿ’

                ಮೇಲಿನ ಉದಾಹರಣೆಯಲ್ಲಿ  ‘ ಗಿಳಿ ಮರಿಯಿಲ್ಲದ ತೋಟ, ಮರಿದುಂಬಿಯಿಲ್ಲದ ತೋಟ, ಹಂಸಗಳಿಲ್ಲದ ಸರೋವರ ಇವೆಲ್ಲವೂ ಅಪ್ರಸ್ತುತ                     ಮಕ್ಕಳಾಡದ ಅಂಗಳ ಅಂಗಳವಲ್ಲ ಎನ್ನುವುದು ಪ್ರಸ್ತುತ’.

  • ರೂಪಕ ಅಲಂಕಾರ – ಉಪಮೇಯ(ಹೋಲಿಸಿ ಕೊಳ್ಳುವ ವಸ್ತು) , ಉಪಮಾನ(ಹೋಲಿಕೆ ಮಾಡುವ ವಸ್ತು) ಎರಡೂ ಒಂದೇ ಎಂದು ವರ್ಣಿಸುವುದು.

           ಉ.ದಾ -

           ‘ಸೀತೆಯ ಮುಖ ಕಮಲ’ ಉಪಮೇಯ = ಸೀತೆಯ ಮುಖ. ಉಪಮಾನ = ಕಮಲ

  • ದೃಷ್ಟಾಂತ ಅಲಂಕಾರ - ಎರಡು ಬೇರೆಬೇರೆ ವಾಕ್ಯಗಳು ಅರ್ಥ ದಿಂದ ಒಂದಕ್ಕೊಂದು ಬಿಂಬದಂತೆ ತೋರುತ್ತಿದ್ದರೆ ಅದು ದೃಷ್ಟಾಂತ ಅಲಂಕಾರ

           ಉದಾ -

             ಉಪ್ಪಿಗಿಂತ ರುಚಿಯಿಲ್ಲ, ತಾಯಿಗಿಂತ ಬಂಧುವಿಲ್ಲ

            'ಮನೆ ಕಟ್ಟಿ ನೋಡು, ಮದುವೆ ಮಾಡಿನೋಡು

ರಾಷ್ಟ್ರಕವಿ ಕುವೆಂಪು ವಿಶ್ವ ಮಾನವ ಸಂದೇಶ – ಪಂಚಮಂತ್ರ – ಸಪ್ತ ಸೂತ್ರ


 ಇಂದು (ಡಿ.29) ‘ದಾರ್ಶನಿಕ ಕವಿ’ ಕುವೆಂಪು (ಕೆ.ವಿ. ಪುಟ್ಟಪ್ಪ) ಜನ್ಮದಿನ. ಸಾಹಿತ್ಯ ಕ್ಷೇತ್ರದಲ್ಲಿ ಆಧ್ಯಾತ್ಮಿಕ ಕಾಣ್ಕೆಯನ್ನೂ ವೈಚಾರಿಕತೆಯನ್ನೂ ಬಿತ್ತಿದ ಮಹಾಚೇತನ ಕುವೆಂಪು ಅಪ್ಪಟ ಅಧ್ಯಾತ್ಮ ಜೀವಿಯಾಗಿದ್ದರು. ಅವರು ರೂಪಿಸಿದ ‘ವಿಶ್ವಮಾನವ ಸಂದೇಶ ‘ ಇಲ್ಲಿ ನೀಡಲಾಗಿದೆ…

ಅವರು ರೂಪಿಸಿದ ‘ವಿಶ್ವಮಾನವ ಸಂದೇಶ ‘ ಇಲ್ಲಿ ನೀಡಲಾಗಿದೆ…


“ಮರ್ತ್ಯಜೀವನದ ತಾಟಸ್ಥ್ಯಮಂ ಕಡೆಕಡೆದು
ಶ್ರದ್ಧೆ ಸಂದೇಹಗಳನಿರದೆ ಹೊಡೆದೆಬ್ಬಿಸುವ,
ಮೇಣ್ ಜನತೆ ಜನತೆಯೊಳ್ ಪಕ್ಷಪಕ್ಷಗಳಂ
ಕೆರಳಿಸುವ ಶತಶತ ಮತಂಗಳಂ ತಾಮಲ್ಲಿ
ರಾರಾಜಿಸಿದುವಗ್ನಿವರ್ಣದ ವೃಕಂಗಳೋಲ್,
ಜೋಲ್ವ ಜಿಹ್ವೆಯೊಳತಿ ಭಯಾನಕಂ-!”
ಅಭಿಷೇಕ ವಿರಾಡ್ ದರ್ಶನಂ – ೧೪೭-೧೫೨ | ಶ್ರೀರಾಮಾಯಣದರ್ಶನಂ, ಶ್ರೀ ಸಂಪುಟ. ಸಂ.೧೩

kuvempu

ವಿಶ್ವಮಾನವ ಸಂದೇಶ

ಪ್ರತಿಯೊಂದು ಮಗುವೂ ಹುಟ್ಟುತ್ತಲೇ ವಿಶ್ವಮಾನವ, ಬೆಳೆಯುತ್ತಾ ನಾವು ಅದನ್ನು ಅಲ್ಪಮಾನವನನ್ನಾಗಿ ಮಾಡುತ್ತೇವೆ. ಮತ್ತೆ ಅದನ್ನು ‘ವಿಶ್ವಮಾನವ’ನನ್ನಾಗಿ ಮಾಡುವುದೆ ವಿದ್ಯೆಯ ಕರ್ತವ್ಯವಾಗಬೇಕು.

ಹುಟ್ಟುವಾಗ ‘ವಿಶ್ವಮಾನವ’ನಾಗಿಯೆ ಹುಟ್ಟಿದ ಮಗುವನ್ನು ನಾವು ದೇಶ, ಭಾಷೆ, ಮತ, ಜಾತಿ, ಜನಾ೦ಗ, ವರ್ಣ ಇತ್ಯಾದಿ ಉಪಾಧಿಗಳಿಂದ ಬದ್ದನನ್ನಾಗಿ ಮಾಡುತ್ತೇವೆ. ಅವೆಲ್ಲವುಗಳಿಂದ ಪಾರಾಗಿ ಅವನನ್ನು ‘ಬುದ್ಧ’ನನ್ನಾಗಿ, ಅಂದರೆ ವಿಶ್ವಮಾನವನನ್ನಾಗಿ ಪರಿವರ್ತಿಸುವುದೇ ನಮ್ಮ ವಿದ್ಯೆ, ಸಂಸ್ಕೃತಿ, ನಾಗರೀಕತೆ ಎಲ್ಲದರ ಆದ್ಯ ಕರ್ತವ್ಯವಾಗಬೇಕು. ಪ್ರಪಂಚದ ಮಕ್ಕಳೆಲ್ಲ ‘ಅನಿಕೇತನ’ರಾಗಬೇಕು, ಲೋಕ ಉಳಿದು, ಬಾಳಿ ಬದುಕಬೇಕಾದರೆ!

ಮಾನವ ವಿಕಾಸದ ಹಾದಿಯಲ್ಲಿ ಆಯಾ ಕಾಲದ ಅಗತ್ಯವನ್ನು ಪೂರೈಸಲು ಮಹಾಪುರುಷರು ಸ೦ಭವಿಸಿ ಹೋಗಿದ್ದಾರೆ. ಆವರಲ್ಲಿ ಕೆಲವರ ವಾಣಿ ವಿಶಿಷ್ಟ ಧರ್ಮವಾಗಿ ರೂಪುಗೊ೦ಡು ಕಡೆಗೆ ಮತವಾಗಿ ಪರಿಮಿತವಾಯಿತು. ಮಾನವರನ್ನು ಕೂಡಿಸಿ ಬಾಳಿಸಬೇಕೆ೦ಬ ಉದ್ದೇಶದಿ೦ದ ಹುಟ್ಟಿಕೊ೦ಡ ಮಹಾತ್ಮರ ವಾಣಿ ಮತವಾಗಿ ಮಾದಕವಾಯಿತು. ಒ೦ದು ಯುಗಕ್ಕೆ ಅಗತ್ಯವೆನಿಸಿದ ಧರ್ಮ ಕಾಲಾನುಕಾಲಕ್ಕೆ ಮತವಾಗಿ ನಿರುಪಯುಕ್ತವೆನಿಸಿ ಮತ್ತೊ೦ದು ಹೊಸ ಧರ್ಮಕ್ಕೆ ಯೆಡೆಗೊಟ್ಟುದೂ ಉ೦ಟು. ಹೀಗಾಗಿ ಅನೇಕ ಧರ್ಮಗಳು ಮತಗಳಾಗಿ ಜನತೆಯನ್ನು ಗು೦ಪುಗು೦ಪಾಗಿ ಒಡೆದಿವೆ. ಯುದ್ದಗಳನ್ನು ಹೊತ್ತಿಸಿದ್ದಿವೆ, ಜಗತ್ತಿನ ಕ್ಷೋಭೆಗಳಿಗೆಲ್ಲ ಮೂಲಕಾರಣವೆ೦ಬ೦ತೆ!

ವಿಜ್ಞಾನಯುಗದ ಪ್ರಾಯೋಗಿಕ ದೃಷ್ಟಿಗೆ ಇನ್ನುಮೇಲೆ ಮತ ಮೌಢ್ಯ ಒಪ್ಪಿಗೆಯಾಗದು. ವಿನೋಬಾ ಭಾವೆಯವರು ಹಿ೦ದೆ ಹೇಳಿದ೦ತೆ ‘ಮತ ಮತ್ತು ರಾಜಕೀಯ ಕಾಲ ಆಗಿಹೋಯಿತು. ಇನ್ನೇನಿದ್ದರೂ ಆಧ್ಯಾತ್ಮ ಮತ್ತು ವಿಜ್ಞಾನದ ಕಾಲ ಬರಬೇಕಾಗಿದೆ.’

ಪಂಚಮಂತ್ರ

ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿ – ಈ ಪ೦ಚಮ೦ತ್ರ ಇನ್ನು ಮು೦ದಿನ ದೃಷ್ಟಿಯಾಗಬೇಕಾಗಿದೆ. ಅ೦ದರೆ, ನಮಗೆ ಇನ್ನು ಬೇಕಾದುದು ಆ ಮತ ಈ ಮತ ಅಲ್ಲ; ಮನುಜ ಮತ. ಆ ಪಥ ಈ ಪಥ ಅಲ್ಲ; ವಿಶ್ವಪಥ. ಆ ಒಬ್ಬರ ಈ ಒಬ್ಬರ ಉದಯ ಮಾತ್ರವಲ್ಲ; ಸರ್ವರ ಸರ್ವಸ್ತರದ ಉದಯ. ಪರಸ್ಪರ ವಿಮುಖವಾಗಿ ಸಿಡಿದು ಹೋಗುವುದಲ್ಲ; ಸಮನ್ವಯಗೊಳ್ಳುವುದು. ಮಿತಮತದ ಆ೦ಶಿಕ ದೃಷ್ಟಿಯಿ೦ದ ಕಾಣುವ ಪೂರ್ಣದೃಷ್ಟಿ. ಯಾವ ಭಾವನೆಗಳು ಜಗತ್ತಿನಲ್ಲಿ ಎಲ್ಲ ಮಾನವರಿಗೂ ಅನ್ವಯವಾಗಬಹುದೊ ಅ೦ತಹ ಭಾವನೆ ಅ೦ತಹ ದೃಷ್ಟಿ ಬರಿಯ ಯಾವುದೋ ಒ೦ದು ಜಾತಿಗೆ, ಮತಕ್ಕೆ, ಗು೦ಪಿಗೆ, ಒ೦ದು ದೇಶಕ್ಕೆ ಮಾತ್ರ ಅನ್ವಯವಾಗುವುದಿಲ್ಲ. ಸರ್ವಕಾಲಕ್ಕೂ ಅನ್ವಯವಾಗುವ ಇವು ಮೂಲಮೌಲ್ಯಗಳು. ಈ ಮೌಲ್ಯಗಳು ಮಾನವರನ್ನು ಕೂಡಿಸಿ ಬಾಳಿಸುವತ್ತ ನಡೆದಾವು. ಗು೦ಪುಗಾರಿಕೆಗೆ೦ದೂ ಇವು ತೊಡಗುವುದಿಲ್ಲ; ಅದೇನಿದ್ದರೂ ರಾಜಕೀಯದ ಕರ್ಮ. ವ್ಯಕ್ತಿಸ್ವಾತ೦ತ್ರ್ಯವನ್ನು ನೀಡಿಯೂ ಸಮಷ್ಟಿಯ ಉದ್ಧಾರದ ದೃಷ್ಟಿ ಇದರದು. ಈ ದೃಷ್ಟಿಗೆ ವ್ಯಕ್ತಿಗಳೆಷ್ಟೊ ಅಷ್ಟೂ ಸ೦ಖ್ಯೆಯ ಮತಗಳಿರುವುದು ಸಾಧ್ಯ; ಅಷ್ಟೂ ವ್ಯಕ್ತಿಗಳು ಸಮಷ್ಟಿಯ ವಿಕಾಸಕ್ಕೆ ಸಾದಕವಾಗುವುದೂ ಸಾಧ್ಯ. ಈ ‘ದರ್ಶನ’ವನ್ನೆ ‘ವಿಶ್ವಮಾನವ ಗೀತೆ’ ಸಾರುತ್ತದೆ.

ಸಪ್ತಸೂತ್ರ

  1. “ಮನುಷ್ಯಜಾತಿ ತಾನೊ೦ದೆ ವಲ೦” ಎ೦ಬುದನ್ನು ನಿರುಪಾಧಿಕವಾಗಿ ಸ್ವೀಕರಿಸಬೇಕು.
  2. ವರ್ಣಾಶ್ರಮವನ್ನು ತಿದ್ದುವುದಲ್ಲ, ಅದನ್ನು ಸ೦ಪೂರ್ಣವಾಗಿ ತೊಲಗಿಸಬೇಕು. ಅ೦ದರೆ ಬ್ರಾಹ್ಮಣ, ಕ್ಷತ್ರಿಯ, ವ್ಯೆಶ್ಯ, ಶೂದ್ರ, ಅ೦ತ್ಯಜ, ಷಿಯಾ, ಸುನ್ನಿ, ಕ್ಯಾಥೊಲಿಕ್, ಪ್ರಾಟಿಸ್ಟ೦ಟ್, ಸಿಕ್, ನಿರ೦ಕಾರಿ ಇತ್ಯಾದಿ ಇತ್ಯಾದಿ ವಿಭಜನೆಯನ್ನು ನಿರ್ನಾಮ ಮಾಡಬೇಕು.
  3. ಎಲ್ಲ ದೇಶಗಳಲ್ಲಿ ಮತ್ತು ಎಲ್ಲ ಮತಗಳಲ್ಲಿರುವ ಜಾತಿಪದ್ದತಿಯನ್ನು ಸ೦ಪೂರ್ಣವಾಗಿ ನಿರಾಕರಿಸಿ, ವಿನಾಶಗೊಳಿಸಬೇಕು.
  4. ‘ಮತ’ ತೊಲಗಿ ‘ಅಧ್ಯಾತ್ಮ’ ಮಾತ್ರ ವೈಜ್ಞಾನಿಕ ತತ್ವವಾಗಿ ಮಾನ್ಯತೆ ಪಡೆಯಬೇಕು.
  5. ಮತ ‘ಮನುಜಮತ’ವಾಗಬೇಕು; ಪಥ ‘ವಿಶ್ವಪಥ’ವಾಗಬೇಕು; ಮನುಷ್ಯ ‘ವಿಶ್ವಮಾನವ’ನಾಗಬೇಕು.
  6. ಮತ ಗು೦ಪು ಕಟ್ಟುವ ವಿಷಯವಾಗಬಾರದು. ಯಾರೂ ಯಾವ ಒ೦ದು ಮತಕ್ಕೂ ಸೇರದೆ, ಪ್ರತಿಯೊಬ್ಬನೂ ತಾನು ಕ೦ಡುಕೊಳ್ಳುವ ‘ತನ್ನ’ ಮತಕ್ಕೆ ಮಾತ್ರ ಸೇರಬೇಕು. ಅ೦ದರೆ ಜಗತ್ತಿನಲ್ಲಿ ಎಷ್ಟು ವ್ಯಕ್ತಿಗಳಿದ್ದಾರೋ ಅಷ್ಟೇ ಸ೦ಖ್ಯೆಯ ಮತಗಳಿರುವ೦ತಾಗುತ್ತದೆ. ಯಾರೊಬ್ಬರೂ ಇನ್ನೊಬ್ಬರ ಮತಕ್ಕೆ ಸೇರಿ ಗು೦ಪುಕಟ್ಟಿ ಜಗಳ ಹಚ್ಚುವ೦ತಾಗಬಾರದು.
  7. ಯಾವ ಒ೦ದು ಗ್ರ೦ಥವೂ ‘ಏಕೈಕ ಪರಮ ಪೂಜ್ಯ’ ಧರ್ಮಗ್ರ೦ಥವಾಗಬಾರದು. ಪ್ರತಿಯೊಬ್ಬ ವ್ಯಕ್ತಿಯೂ ತನಗೆ ಸಾಧ್ಯವಾದವುಗಳನ್ನೆಲ್ಲ ಓದಿ ತಿಳಿದು ತನ್ನ ‘ದರ್ಶನ’ವನ್ನು ತಾನೇ ನಿರ್ಣಯಿಸಿ ಕಟ್ಟಿಕೊಳ್ಳಬೇಕು.







ʼಬಾರಿಸು ಕನ್ನಡ ಡಿಂಡಿಮವʼ ರಾಷ್ಟ್ರಕವಿ ಕುವೆಂಪುರವರ ಕವಿತೆಯ ಭಾವಾರ್ಥ


ಬಾರಿಸು ಕನ್ನಡ ಡಿಂಡಿಮವ,
ಓ ಕರ್ನಾಟಕ ಹೃದಯಶಿವ!

ಸತ್ತಂತಿಹರನು ಬಡಿದೆಚ್ಚರಿಸು;
ಕಚ್ಚಾಡುವರನು ಕೂಡಿಸಿ ಒಲಿಸು.
ಹೊಟ್ಟೆಯಕಿಚ್ಚಿಗೆ ಕಣ್ಣೀರ್ ಸುರಿಸು;
ಒಟ್ಟಿಗೆ ಬಾಳುವ ತೆರದಲಿ ಹರಸು!
ಬಾರಿಸು ಕನ್ನಡ ಡಿಂಡಿಮವ,
ಓ ಕರ್ನಾಟಕ ಹೃದಯಶಿವ!

ಕ್ಷಯಿಸೆ ಶಿವೇತರ ಕೃತಿಕೃತಿಯಲ್ಲಿ
ಮೂಡಲಿ ಮಂಗಳ ಮತಿಮತಿಯಲ್ಲಿ:
ಕವಿ ಋಷಿ ಸಂತರ ಆದರ್ಶದಲಿ
ಸರ್ವೋದಯವಾಗಲಿ ಸರ್ವರಲಿ!
ಬಾರಿಸು ಕನ್ನಡ ಡಿಂಡಿಮವ,
ಓ ಕರ್ನಾಟಕ ಹೃದಯಶಿವ!

ಸಾಹಿತ್ಯ: ಕುವೆಂಪು

 

Kannada Bhavageethe Lyrics ಮುಚ್ಚು ಮರೆ ಇಲ್ಲದೆಯೇ / muchu mare illadeye k...

ಮುಚ್ಚು ಮರೆ ಇಲ್ಲದೆಯೇ ನಿನ್ನಮುಂದೆಲ್ಲವನು ಬಿಚ್ಚಿಡುವೇ ಓ ಗುರುವೇ ಅಂತರಾತ್ಮ
ಪಾಪವಿದೆ ಪುಣ್ಯವಿದೆ , ನರಕವಿದೆ ನಾಕವಿದೆ, ಸ್ವೀಕರಿಸು ಓ ಗುರುವೇ ಅಂತರಾತ್ಮ
|| ಮುಚ್ಚು ಮರೆ ಇಲ್ಲದೆಯೇ ||
ರವಿಗೆ ಕಾಂತಿಯನೀವ ನಿನ್ನ ಕಣ್ಣೀಕ್ಷಿಸಲು, ಪಾಪ ತಾನುಳಿಯುವುದೇ ಪಾಪವಾಗಿ
ಗಂಗೆ ತಾನುದ್ಭವಿಪ ನಿನ್ನಡಿಯ ಸೋಂಕಿಂಗೇ, ನರಕ ತಾನುಳಿಯುವುದೇ ನರಕವಾಗಿ
|| ಮುಚ್ಚು ಮರೆ ಇಲ್ಲದೆಯೇ ||
ಸಾಂತ ರೀತಿಯನೆಮ್ಮೀ ಕದಡಿರುವುದೆನ್ನಾತ್ಮ, ನಾಂತರೀತಿಯು ಅದೆಂತೋ ಓ ಅನಂತ
ನನ್ನ ನೀತಿಯ ಕುರುಡಿನಿಂದೆನ್ನ ರಕ್ಶಿಸಯ್, ನಿನ್ನ ಪ್ರೀತಿಯ ಬೆಳಕಿನ ಆನಂದಕೆ
|| ಮುಚ್ಚು ಮರೆ ಇಲ್ಲದೆಯೇ ||
ಸಾಹಿತ್ಯ – ಕುವೆಂಪು

ಕರುನಾಡು ಕಂಡ ಕೆಚ್ಚೆದೆಯ ದೊರೆ ಗಂಡುಗಲಿ ಕುಮಾರರಾಮ KUMMATADURGA FORT ಪರನಾರಿ ಸಹೋ...


ಗಂಡುಗಲಿ ಕುಮಾರರಾಮ | Gandugali Kumara Rama | Unknown Hero Vijaya Nagara Empire | History | ಇತಿಹಾಸ ಕುಮಾರರಾಮನ ಸಾಂಗತ್ಯ ಗಂಡುಗಲಿ ಕುಮಾರರಾಮ ಕನ್ನಡ ಮೂವಿ Gandugali Kumara Rama history in Kannada ರತ್ನಾಜಿಯ ಪ್ರಕರಣ Gandugali kumara rama prabandha in kannada Gandugali Kumara Rama wiki ನಂಜುಂಡ ಕವಿ Gandugali Kumararama History-Kummatadurga

ಚೆನ್ನಕೇಶವ ದೇವಾಲಯದ ಸಂಕ್ಷಿಪ್ತ ಇತಿಹಾಸ. ಇದರ ವಿಶೇಷವಾದ ಆಕರ್ಷಣೆಯ ರಹಸ್ಯ



ರುದ್ರರಮಣೀಯವಾದ ಬೇಲೂರು ಚೆನ್ನಕೇಶವ ದೇವಾಲಯದ ಸಂಕ್ಷಿಪ್ತ ಇತಿಹಾಸ. ಇದರ ವಿಶೇಷವಾದ ಆಕರ್ಷಣೆಯ ರಹಸ್ಯ ತಿಳಿಯಲು ತಪ್ಪದೇ ಈ ವಿಡಿಯೋ ನೋಡಿ...


ಬೇಲೂರು ಚೆನ್ನಕೇಶವ ದೇವಾಲಯ : ಬಲ್ಲವರೇ ಬಲ್ಲರು ಬೆಲ್ಲದ ಸವಿಯ ಎಂಬಂತೆ ಬೇಲೂರು ದೇವಾಲಯವನ್ನು ನೋಡಿದವರಿಗೆ ಮಾತ್ರ ಅದರ ಅದ್ಧೂರಿ ಶಿಲ್ಪಕಲೆಯ ಆಕರ್ಷಣೆ ಅರಿವಾಗುವುದು. ಈ ಬೇಲೂರು ಚೆನ್ನಕೇಶವ ದೇವಾಲಯದ ವಿಶೇಷಗಳೇನು ಎಂಬ ವಿವರ ಇಲ್ಲಿದೆ ನೋಡಿ.

ಈ ದೇವಾಲಯ ಕಟ್ಟಲೇ ಬರೋಬ್ಬರಿ 103 ವರ್ಷಗಳು ಬೇಕಾದವು. ಅಷ್ಟೂ ವರ್ಷದ ಶ್ರಮ, ಶಿಲ್ಪಿಗಳ ಬೆವರು ಎಲ್ಲವೂ ಇಂದಿಗೂ ಪ್ರತಿಫಲನವಾಗುವುದು ಈ ದೇವಾಲಯದ ಸೌಂದರ್ಯ ನೋಡಿದಾಗ. 
ಹೌದು, ಬೇಲೂರು ಚೆನ್ನಕೇಶವ ದೇವಾಲಯ ಎಂದರೆ ಹೊಯ್ಸಳ ಶಿಲ್ಪಕಲೆಯ ಅದ್ಧೂರಿತನದ ಪ್ರದರ್ಶನ. 12ನೇ ಶತಮಾನದಲ್ಲಿ ಹೊಯ್ಸಳ ಆಳ್ವಿಕೆ ನಡೆಸುತ್ತಿದ್ದ ರಾಜಾ ವಿಷ್ಣುವರ್ಧನನ ಕನಸಿನ ಕೂಸು ಈ ಬೇಲೂರು ಚೆನ್ನಕೇಶವ ದೇವಾಲಯ. ಆಗಿನ ಕಾಲದಲ್ಲಿ ಬೇಲೂರು ಹೊಯ್ಸಳರ ರಾಜಧಾನಿ ಆಗಿತ್ತು. ಇಂದಿಗೂ ಕೂಡಾ ಅಂದಿನ ರಾಜವೈಭೋಗವನ್ನು ಸಾರುವಂತೆ ಆಡಂಬರದ ಶಿಲ್ಪಕಲೆ, ವಾಸ್ತುಶಿಲ್ಪ ಹೊತ್ತು ನಿಂತಿದೆ ದೇವಾಲಯ. ಈ ದೇವಾಲಯದ ಕುರಿತ ಕೆಲ ಆಸಕ್ತಿಕರ ವಿಷಯಗಳು ಇಲ್ಲಿವೆ..

900 ವರ್ಷಗಳಷ್ಟು ಹಳೆಯದಾದ ಬೇಲೂರು ಚೆನ್ನಕೇಶವ ದೇವಾಲಯವು ಭಾರತೀಯ ಕಲೆ, ವಾಸ್ತುಶಿಲ್ಪ ಮತ್ತು ಶಿಲ್ಪಕಲೆಯ ಶ್ರೇಷ್ಠ ನಿಧಿಗಳಲ್ಲಿ ಒಂದಾಗಿದೆ, ಇವೆಲ್ಲವೂ ಸನಾತನ ಧರ್ಮದ ಪ್ರೇರಣೆಯಿಂದ ಸಾಧಿಸಲ್ಪಟ್ಟಿದೆ. ಈ ದೇವಾಲಯವು ಪ್ರಾರಂಭದಿಂದಲೂ ನಮ್ಮ ಕಾಲದವರೆಗೆ ಅದರ ಭವ್ಯವಾದ ಇತಿಹಾಸವನ್ನು ವಿವರಿಸುತ್ತದೆ.



ಹೊಯ್ಸಳ ವಿಷ್ಣುವರ್ಧನ: ಭಕ್ತಿಯ ವಾಸ್ತುಶಿಲ್ಪಿ
ಒಂಬೈನೂರು ವರ್ಷಗಳ ಹಿಂದೆ, ಬೇಲೂರು ಅಥವಾ ವೇಲಾಪುರಿ ಅಭಿವೃದ್ಧಿ ಹೊಂದುತ್ತಿರುವ ರಾಜಕೀಯ ಕೇಂದ್ರವಾಗಿತ್ತು ಮತ್ತು ಭಾರತದ ಸಾಂಸ್ಕೃತಿಕ ರಾಜಧಾನಿಗಳಲ್ಲಿ ಒಂದಾಗಿದೆ. ಇದು ದಕ್ಷಿಣ ಭಾರತದ ಕೊನೆಯ ಶ್ರೇಷ್ಠ ಹಿಂದೂ ಸಾಮ್ರಾಜ್ಯವಾದ ಪ್ರಬಲ ಹೊಯ್ಸಳ ಸಾಮ್ರಾಜ್ಯದ ರಾಜಧಾನಿಯಾಗಿತ್ತು, ಇದು ವಿಜಯನಗರದ ಬೀಜವನ್ನು ತನ್ನ ಗರ್ಭದಲ್ಲಿ ಹೊಂದಿತ್ತು.

ಅದರ ಶ್ರೇಷ್ಠ ರಾಜ, ಬಿಟ್ಟಿದೇವ ಅಥವಾ ವಿಷ್ಣುವರ್ಧನ, ಚಾಲುಕ್ಯರ ಸಾಮಂತತ್ವವನ್ನು ತೊಡೆದುಹಾಕಲು ಮತ್ತು ಸ್ವತಂತ್ರ ಹೊಯ್ಸಳ ಸಾಮ್ರಾಜ್ಯವನ್ನು ಸ್ಥಾಪಿಸಿದ ಕೀರ್ತಿಯನ್ನು ಹೊಂದಿದ್ದಾರೆ. ನಂತರ, ಒಂದು ನಿರ್ಣಾಯಕ ಯುದ್ಧದಲ್ಲಿ, ಅವರು ತಲಕಾಡಿನಲ್ಲಿ ಚೋಳ ವೈಸರಾಯ್ ಅನ್ನು ಹದಗೆಡಿಸಿದರು ಮತ್ತು ದಕ್ಷಿಣ ಭಾರತದ ಗಣನೀಯ ಭಾಗದ ಮೇಲೆ ಅವರ ಪ್ರಶ್ನಾತೀತ ಅಧಿಕಾರವನ್ನು ಮುದ್ರೆಯೊತ್ತಿದರು. ವಿಷ್ಣುವರ್ಧನನು ಬೇಲೂರಿನಲ್ಲಿ ವೀರನಾರಾಯಣ ಸ್ವಾಮಿಯ ಮುಖ್ಯ ದೇವಾಲಯವನ್ನು ನಿರ್ಮಿಸುವ ಮೂಲಕ ಈ ಅದ್ಭುತ ವಿಜಯವನ್ನು ಗುರುತಿಸಿದನು, ಇದನ್ನು ಶಾಸನಗಳು ದಾಖಲಿಸುತ್ತವೆ. ಅದರ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾದ ಭವ್ಯವಾದ ಮೂರ್ತಿಯನ್ನು ಅರ್ಹವಾಗಿ ಚೆನ್ನಕೇಶವ (ಸುಂದರ ಕೇಶವ) ಎಂದು ಕರೆಯಲಾಗುತ್ತದೆ. ವಾಸ್ತವವಾಗಿ, ಬೇಲೂರು ದೇವಾಲಯವು ಇಂದಿಗೂ ಚೆನ್ನಕೇಶವ ದೇವಾಲಯ ಎಂದು ಪ್ರಸಿದ್ಧವಾಗಿದೆ. ಅದರ ಪ್ರಭಾವವು ಎಷ್ಟು ಸಹಿಷ್ಣುವಾಗಿದೆಯೆಂದರೆ ಆ ಪ್ರದೇಶದ ಜನರು ಈ ದೇವತೆಯ ಹೆಸರನ್ನು ಚೆನ್ನಕೇಶವ, ಚೆನ್ನಯ್ಯ, ಚೆನ್ನಿಗಪ್ಪ, ಇತ್ಯಾದಿ ಎಂದು ಕರೆಯುತ್ತಾರೆ. ಆದಾಗ್ಯೂ, ವಿಷ್ಣುವರ್ಧನನು ರಾಮಾನುಜಾಚಾರ್ಯರ ಆಶ್ರಯದಲ್ಲಿ ಶ್ರೀ ವೈಷ್ಣವ ಸಂಪ್ರದಾಯಕ್ಕೆ ಮತಾಂತರಗೊಳ್ಳುವ ಸಂಕೇತವಾಗಿ ದೇವಾಲಯವನ್ನು ನಿರ್ಮಿಸಿದನು ಎಂದು ಸಂಪ್ರದಾಯವು ಹೇಳುತ್ತದೆ.



ಅಂದಿನಿಂದ, ಈ ದೇವಾಲಯದ ಕಲಾತ್ಮಕ ವೈಭವವು ಪ್ರಪಂಚದಾದ್ಯಂತದ ಅಪಾರ ಸಂಖ್ಯೆಯ ಭಕ್ತರು, ಪ್ರವಾಸಿಗರು ಮತ್ತು ಸಂದರ್ಶಕರನ್ನು ಆಕರ್ಷಿಸುತ್ತಿದೆ. ರಚನೆಗಳ ವೈಭವ, ಶಿಲ್ಪಗಳ ಮೋಡಿ, ಅದರ ಅಲಂಕಾರಿಕ ವಿವರಗಳ ವೈವಿಧ್ಯತೆ ಮತ್ತು ಸ್ತಂಭಗಳು ಮತ್ತು ಫಲಕಗಳ ಸೂಕ್ಷ್ಮ ಮತ್ತು ಸೂಕ್ಷ್ಮ ಕೆತ್ತನೆಗಳ ಬಗ್ಗೆ ಸಂಪೂರ್ಣ ಆಕರ್ಷಣೆಯನ್ನು ಹೊಂದಿರುವ ವಿದ್ಯಾರ್ಥಿಗಳು ಮತ್ತು ಕಲಾ ಅಭಿಜ್ಞರ ಮೇಲೆ ಇದು ಕಾಂತೀಯ ಪ್ರಭಾವವನ್ನು ಬೀರುವುದನ್ನು ಮುಂದುವರೆಸಿದೆ. ದ್ವಾರಗಳು ಮತ್ತು ಛಾವಣಿಗಳು. ಸತತವಾದ ಫ್ರೈಜ್‌ಗಳು, ಒಂದರ ಮೇಲೊಂದರಂತೆ, ಅಲಂಕಾರಿಕ ಲಕ್ಷಣಗಳು, ಪಕ್ಷಿಗಳು, ಪ್ರಾಣಿಗಳು, ನರ್ತಕರು, ಎಲ್ಲಾ ಹುರುಪಿನ ಜೀವನದಿಂದ ತುಂಬಿರುವ, ವಿವಿಧ ಅಭಿವ್ಯಕ್ತಿಗಳು ಮತ್ತು ಚಲನೆಗಳೊಂದಿಗೆ ಚಿತ್ರಿಸುತ್ತವೆ.
ಕಲೆ ಕಲಾವಿದನನ್ನು ಹುಟ್ಟುಹಾಕುತ್ತದೆ. ಚೆನ್ನಕೇಶವ ದೇವಾಲಯವು ಎಷ್ಟು ಶಕ್ತಿಯುತವಾಗಿದೆ ಮತ್ತು ತುಂಬಾ ಪ್ರಭಾವಶಾಲಿಯಾಗಿದೆಯೆಂದರೆ , ಅದರ ಶಿಲ್ಪಗಳ ಕಲಾತ್ಮಕ ಸೂಕ್ಷ್ಮತೆಗಳ ಸಾಹಿತ್ಯದ ಅನ್ವೇಷಣೆಯಾದ ಅಂತಃಪುರಗೀತೆ ಎಂಬ ಪದ್ಯಗಳ ಸಂಗ್ರಹವನ್ನು ಬರೆಯಲು ಡಿವಿಜಿ ಪ್ರಚೋದಿಸಿದರು . ನಿರ್ದಿಷ್ಟ ಶಿಲ್ಪಕ್ಕೆ ಸಂಬಂಧಿಸಿದ ಪ್ರತಿಯೊಂದು ಹಾಡಿಗೆ ಅವರು ರಾಗ ಮತ್ತು ತಾಳವನ್ನು ಸೂಚಿಸಿದ್ದಾರೆ. ಅರ್ಧ ಶತಮಾನಕ್ಕೂ ಹೆಚ್ಚು ಕಾಲ, ಈ ಹಾಡುಗಳನ್ನು ಹದಿನೈದು ಸಂದರ್ಭಗಳಲ್ಲಿ ಪ್ರದರ್ಶಿಸಲಾಗಿದೆ ಮತ್ತು ಅವುಗಳ ಸುತ್ತಲೂ ಶಾಸ್ತ್ರೀಯ ನೃತ್ಯ ಪ್ರದರ್ಶನಗಳನ್ನು ಹೆಣೆಯಲಾಗಿದೆ. ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ, ಡಿವಿಜಿ ಅವರು ಚೆನ್ನಕೇಶವ ದೇವಾಲಯವನ್ನು ಅಮರಗೊಳಿಸಿದ್ದಾರೆ ಮತ್ತು ಅದು ಅವರನ್ನು ಅಮರಗೊಳಿಸಿದೆ.

ದೇವಾಲಯದ ರಚನೆಗಳ ಐತಿಹಾಸಿಕ, ವಾಸ್ತುಶಿಲ್ಪ ಮತ್ತು ವಿಶೇಷ ಅಧ್ಯಯನಗಳು ವಿಷ್ಣುವರ್ಧನನು ನಕ್ಷತ್ರಾಕಾರದ ಗರ್ಭಗೃಹ , ಸುಕನಾಸಿ ಮತ್ತು ನವರಂಗವನ್ನು ಮಾತ್ರ ನಿರ್ಮಿಸಿದನು ಎಂದು ತೋರಿಸುತ್ತದೆ . ಹೊರಭಾಗದಲ್ಲಿರುವ ಬೃಹತ್ ಗೂಡುಗಳು, ಫ್ರೈಜ್‌ಗಳು ಮತ್ತು ಶಿಲ್ಪಗಳು, ಮೂರು ದ್ವಾರಗಳನ್ನು ಒಳಗೊಂಡಂತೆ ಸುಂದರವಾಗಿ ವಿನ್ಯಾಸಗೊಳಿಸಲಾದ ಆಂತರಿಕ ಕಂಬಗಳು ಮತ್ತು ಛಾವಣಿಗಳು ಅವನ ಕಾಲದಲ್ಲಿ ಕೆತ್ತಲ್ಪಟ್ಟವು. ಗರ್ಭಗೃಹವು ಮರದ ಕೆಲಸದಿಂದ ಬೆಂಬಲಿತವಾದ ಇಟ್ಟಿಗೆ ಮತ್ತು ಗಾರೆಗಳ ಎತ್ತರದ ನಕ್ಷತ್ರಾಕಾರದ ಗೋಪುರದಿಂದ ಆರೋಹಿಸಲ್ಪಟ್ಟಿದೆ ಮತ್ತು ಚಿನ್ನದ-ಮೆರುಗೆಣ್ಣೆ ತಾಮ್ರದ ಹಾಳೆಗಳಿಂದ ಲೇಪಿತವಾಗಿದೆ . ಎತ್ತರದ ನೆಲದ ಮೇಲಿರುವ ಎತ್ತರದ ವೇದಿಕೆಯ ಮೇಲೆ ನಿಂತಿರುವ ಈ ದೇವಾಲಯವು ಆಜ್ಞಾಧಾರಕ ಉಪಸ್ಥಿತಿಯನ್ನು ಹೊಂದಿದೆ, ನೀವು ಅದನ್ನು ನೋಡಿದ ಕ್ಷಣದಲ್ಲಿ ನಿಮ್ಮನ್ನು ತನ್ನ ತೆಕ್ಕೆಗೆ ಎಳೆದುಕೊಳ್ಳುತ್ತದೆ.




ಸುಂದರವಾದ ಚೆನ್ನಕೇಶವ ಮೂರ್ತಿಯನ್ನು ಕ್ರಿಸ್ತ ಶಕ 1117ರಲ್ಲಿ ಗರ್ಭಗೃಹದಲ್ಲಿ ಪ್ರತಿಷ್ಠಾಪಿಸಲಾಯಿತು. ವಿಷ್ಣುವರ್ಧನನ ರಾಣಿ ಸಂತಾಲಾದೇವಿಯ ಶಾಶ್ವತ ಕೊಡುಗೆಯನ್ನು ಹೇಳಬೇಕೆಂದರೆ, ಮುಖ್ಯ ದೇವಾಲಯದ ಸಾಲಿನಲ್ಲಿ ಚೆನ್ನಿಗರಾಯ ದೇವಾಲಯವನ್ನು ನಿರ್ಮಿಸಿದಳು. ಅಂತೆಯೇ, ಇದು ಸ್ವತಃ ಒಂದು ಅದ್ಭುತವಾಗಿದೆ ಮತ್ತು ಅವಳ ಪವಿತ್ರ ಪ್ರತಿಜ್ಞೆಯ ನೆರವೇರಿಕೆಯನ್ನು ಗುರುತಿಸಲು ಅವಳ ಶಿಲಾ ಶಾಸನವನ್ನು ಹೊಂದಿದೆ. 

ವಾಸ್ತವವಾಗಿ, ದೇವಾಲಯವು ಸ್ವತಃ ಮತ್ತು ಸ್ವತಃ ಒಂದು ಯುಗವಾಯಿತು. ವಿಷ್ಣುವರ್ಧನನ ನಂತರ ಬಂದ ಪ್ರತಿಯೊಬ್ಬ ಅರಸರು ಇದಕ್ಕೆ ವಿಶೇಷ ಪೂಜೆ ಸಲ್ಲಿಸಿದರು ಮತ್ತು ಅದನ್ನು ಕಾಪಾಡಿಕೊಳ್ಳಲು ಹೆಚ್ಚಿನ ಕಾಳಜಿ ವಹಿಸಿದರು.

ಮೊದಲನೆಯದು, ವಿಷ್ಣುವರ್ಧನನ ಮಗ ಮತ್ತು ಉತ್ತರಾಧಿಕಾರಿಯಾದ ಒಂದನೇ ನರಸಿಂಹ ಇದರ ನಿರ್ವಹಣೆ ಮತ್ತು ನಿಯಮಿತವಾದ ಪೂಜೆಗಾಗಿ ಉದಾರ ಅನುದಾನವನ್ನು ನೀಡಿದರು. ನವರಂಗದ ದ್ವಾರದ ಉತ್ತರಕ್ಕೆ ಇರುವ “ದರ್ಬಾರ್” ದೃಶ್ಯವು ಅವನು ದೇವಾಲಯಕ್ಕೆ ಗಣನೀಯ ಸುಧಾರಣೆಗಳನ್ನು ಮಾಡಿರಬಹುದು ಎಂದು ಸೂಚಿಸುತ್ತದೆ. 

ಮುಂದಿನ ರಾಜ ಎರಡನೇ ಬಲ್ಲಾಳ ಕ್ರಿಸ್ತ ಶಕ  1176ರಲ್ಲಿ ದೇವಾಲಯದ ಈಶಾನ್ಯಕ್ಕೆ ವಾಸುದೇವತೀರ್ಥ ಎಂಬ ಆಕರ್ಷಕ ಕೊಳವನ್ನು ನಿರ್ಮಿಸಿದನು. ನಂತರ, 1180 ರಲ್ಲಿ, ಅವರು ಸಂಯುಕ್ತದ ವಾಯುವ್ಯ ಮೂಲೆಯಲ್ಲಿ ಉಗ್ರಾಣವನ್ನು ನಿರ್ಮಿಸಿದನು. ಮುಖ್ಯ ದೇವಾಲಯದ ನವರಂಗ ಮಂಟಪ ಎಲ್ಲಾ ಕಡೆ ತೆರೆದಿದ್ದು, ರಂದ್ರ ಪರದೆಗಳಿಂದ ಮುಚ್ಚಲಾಗಿತ್ತು . ಮೂರು ಪ್ರವೇಶದ್ವಾರಗಳಿಗೆ ಬೃಹತ್ ಮರದ ಬಾಗಿಲುಗಳನ್ನು ಅಳವಡಿಸಲಾಗಿತ್ತು.

ಚೆನ್ನಕೇಶವ ದೇವಾಲಯದ ಭವ್ಯ ಇತಿಹಾಸದಲ್ಲಿ ಮುಂದಿನ ಅವಧಿಯು ಕೊನೆಯ ಹೊಯ್ಸಳ ಚಕ್ರವರ್ತಿ, ಮೂರನೇ ವೀರ ಬಲ್ಲಾಳನ ಆಳ್ವಿಕೆಯಲ್ಲಿ ಸಂಭವಿಸುತ್ತದೆ. ಸೋಮಯ್ಯ ದಣ್ಣಾಯಕ ಎಂಬ ಅವರ ಕಮಾಂಡಿಂಗ್ ಅಧಿಕಾರಿಯೊಬ್ಬರು ಕೇಂದ್ರ ಗೋಪುರವನ್ನು ಇಟ್ಟಿಗೆ ಮತ್ತು ಮರದಿಂದ ಪುನರ್ನಿರ್ಮಿಸಿದರು. ಸೋಮಯ್ಯ ಡಣ್ಣಾಯಕ ವಿಜಯನಗರ ಸಾಮ್ರಾಜ್ಯದ ಸ್ಥಾಪನೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾನೆ.

ತುಘಲಕ್ ಸೈನ್ಯವು ದಕ್ಷಿಣ ಭಾರತವನ್ನು ಆಕ್ರಮಿಸಿದಾಗ ಒಂದು ಶತಮಾನಕ್ಕೂ ಹೆಚ್ಚು ಸಮಯದ ನಂತರ ಭಯೋತ್ಪಾದನೆ ಮತ್ತು ದುರಂತವು ಬೇಲೂರಿಗೆ ಭೇಟಿ ನೀಡಿತು. ಕಲ್ಬುರ್ಗಿಯ ಗಂಗು ಸಾಲಾರ್ ಎಂಬ ಮತಾಂಧ ಸೇನಾಪತಿ ದೇವಸ್ಥಾನಕ್ಕೆ ಮುತ್ತಿಗೆ ಹಾಕಿ ಅದರ ಮಹಾದ್ವಾರವನ್ನು ಸುಟ್ಟುಹಾಕಿದನು ಎಂದು ತಿಳಿಯುತ್ತದೆ.

ಹೊಯ್ಸಳರ ಉತ್ತರಾಧಿಕಾರಿಯಾದ ವಿಜಯನಗರ ಚಕ್ರವರ್ತಿಗಳು ಚೆನ್ನಕೇಶವ ದೇವಾಲಯಕ್ಕೂ ಅದೇ ಗೌರವವನ್ನು ತೋರಿಸಿದರು. ವಾಸ್ತವವಾಗಿ, ಹಿಂದಿನಿಂದಲೂ ಪರಂಪರೆಯಿಂದ ಬಂದ ಒಳ್ಳೆಯ ಮತ್ತು ಸುಂದರವಾದ ಎಲ್ಲವನ್ನೂ ಸಂರಕ್ಷಿಸುವುದು ವಿಜಯನಗರದ ಅರಸರ ಅಡಿಪಾಯ ಮತ್ತು ರಾಜ್ಯ ನೀತಿಯಾಗಿತ್ತು.

ಅಂದಿನ ರಾಜವೈಭೋಗವನ್ನು ಸಾರುವಂತೆ ಆಡಂಬರದ ಶಿಲ್ಪಕಲೆ, ವಾಸ್ತುಶಿಲ್ಪ ಹೊತ್ತು ನಿಂತಿದೆ ದೇವಾಲಯ. 

ದೇವಾಲಯದ ಪ್ರವೇಶ ದ್ವಾರದಲ್ಲೇ ಸ್ವಾಗತಕ್ಕೆ ನಿಂತಿವೆ ಎರಡು ಸುಂದರ ಕಲ್ಲಿನ ಆನೆಗಳು. ಇದರ ವಾಸ್ತುಶಿಲ್ಪವು ಅದ್ಬುತವಾಗಿದೆ. ಈ ಪ್ರವೇಶ ಸ್ಥಳದಲ್ಲಿಯೇ ಸಣ್ಣ ಸಣ್ಣ ದೇಗುಲಗಳಿವೆ. ಪಕ್ಕದಲ್ಲೇ ಪುಷ್ಕರಣಿ ಇದೆ. ಹೊಯ್ಸಳರ ಆಡಳಿತ ಸಂದರ್ಭದಲ್ಲಿ ಜನರು ಈ ಪುಶ್ಕರಣಿಯಲ್ಲಿ ಪವಿತ್ರ ಸ್ನಾನ ಮಾಡುತ್ತಿದ್ದರು. 

ದೇವಾಲಯದ ಆವರಣದ ಮಧ್ಯಭಾಗದಲ್ಲಿ 42 ಮೀಟರ್ ಎತ್ತರದ ಕಲ್ಲಿನ ಧ್ವಜಸ್ಥಂಭವಿದ್ದು, ನಕ್ಷತ್ರಾಕಾರದ ಬುಡವನ್ನು ಹೊಂದಿದೆ. ಈ ಸ್ಥಂಭದ ವಿಶೇಷ ಎಂದರೆ, ಇದರ ಬುಡಕ್ಕೆ ಯಾವುದೇ ಆಧಾರಗಳಿಲ್ಲ. ಪಾಯ ಇಲ್ಲದೆ ನಿಂತಿದ್ದರೂ ಸಾವಿರಾರು ವರ್ಷಗಳ ಕಾಲದ ಪ್ರಕೃತಿ ಏರುಪೇರಿಗೆ ಕೊಂಚವೂ ವಿಚಲಿತವಾಗದೆ ನಿಂತಿರುವುದು ವಿಶೇಷ. 

ಕೇವಲ ಧ್ವಜಸ್ಥಂಭದ ಬುಡವಲ್ಲ, ಇಡೀ ದೇವಾಲಯವನ್ನೇ ನಕ್ಷತ್ರಾಕಾರದ ಅಡಿಗಟ್ಟಿನ ಮೇಲೆ ನಿರ್ಮಿಸಲಾಗಿದೆ. ಈ ನಕ್ಷತ್ರಾಕಾರವು ಹೊಯ್ಸಳ ವಾಸ್ತುಶಿಲ್ಪದ ಪ್ರತಿನಿಧಿಯಾಗಿದೆ. 

ದೇವಾಲಯದ ಹೊರಾಂಗಣದಲ್ಲಿ ಕಲ್ಲಿನ ಕೆತ್ತನೆಗಳ ಸೌಂದರ್ಯ ವರ್ಣಿಸಲಸದಳವಾಗಿವೆ. ಬಹಳಷ್ಟು ಪ್ರಾಣಿಗಳನ್ನು ಈ ಕಲ್ಲಿನಲ್ಲಿ ಕಾಣಬಹುದು. ಇಲ್ಲಿ ಆನೆಗಳು, ಸಿಂಹಗಳು, ಕುದುರೆಗಳು ಬಲ, ಧೈರ್ಯ ಹಾಗೂ ವೇಗದ ಪ್ರತೀಕವಾಗಿ ಬಹಳಷ್ಟು ಕಡೆ ಕೆತ್ತನೆ ಕಂಡಿವೆ. ಇದಲ್ಲದೆ, ಪ್ರಾಣಿಗಳಿಗೆ ಸಂಬಂಧಿಸಿದ ಮಹಾಭಾರತ ಹಾಗೂ ರಾಮಾಯಣದ ಸನ್ನಿವೇಶಗಳನ್ನು ಕೂಡಾ ಚಿತ್ರಿಸಲಾಗಿದೆ. ಕೇವಲ ಆನೆಯ ಕೆತ್ತನೆಯೇ 600ಕ್ಕಿಂತ ಹೆಚ್ಚು ಇವೆ. 

ಸಿಂಹದೊಂದಿಗೆ ಹೋರಾಡುತ್ತಿರುವ ವ್ಯಕ್ತಿಯ ಚಿತ್ರ ಹೊಯ್ಸಳರ ಲಾಂಛನವಾಗಿದೆ. ಈ ಲಾಂಛನದ ಇತಿಹಾಸ ಹೀಗಿದೆ. ಒಂದು ದಿನ ಸಿಂಹವು ಹಳ್ಳಿಯೊಂದಕ್ಕೆ ನುಗ್ಗಿ ಜನರನ್ನು ಕೊಲ್ಲಲು ಬಂದಾಗ ಸಳನೆಂಬ ಸಾಮಾನ್ಯ ವ್ಯಕ್ತಿಯೊಬ್ಬ ಅದರೊಂದಿಗೆ ಹೋರಾಡಿ ಜಯಿಸುತ್ತಾನೆ. ಈ ಸಂದರ್ಭದಲ್ಲಿ ಅಲ್ಲಿ ಸೇರಿದ್ದ ಜನರೆಲ್ಲ ಹೊಯ್ ಸಳ ಎಂದು ಕೂಗುತ್ತಿರುತ್ತಾರೆ. ಅಂದರೆ ಅದನ್ನು ಕೊಲ್ಲು ಸಳ ಎಂದರ್ಥ. ಈ ಘಟನೆಯಿಂದಲೇ ಹೊಯ್ಸಳ ಸಾಮ್ರಾಜ್ಯ ಸೃಷ್ಟಿಯಾಯಿತು. 

ಬೇಲೂರು ಇಲ್ಲಿನ ಶಿಲಾಬಾಲಿಕೆಯರಿಗಾಗಿಯೇ ಹೆಚ್ಚು ಜನಪ್ರಿಯ. ದೇವಾಲಯದ ಗೋಡೆಗಳ ಮೇಲೆ ಬಹಳಷ್ಟು ಮದನಿಕೆಯರಿದ್ದು ಕಣ್ಮನ ಸೆಳೆಯುತ್ತಾರೆ. ಇವುಗಳಲ್ಲಿ ಅತಿ ಪ್ರಸಿದ್ಧಿ ಪಡೆದಾಕೆ ದರ್ಪಣ ಸುಂದರಿ. ಇದೇ ಅಲ್ಲದೆ, ನೃತ್ಯ ಮಾಡುತ್ತಿರುವ ಬಾಲೆಯರು, ಸಂಗೀತ ಪರಿಕರಗಳನ್ನು ನುಡಿಸುತ್ತಿರುವ ಯುವತಿಯರ ಶಿಲೆಗಳನ್ನು ಕಾಣಬಹುದಾಗಿದೆ. 

ಸಣ್ಣ ಸಣ್ಣ ವಿವರಗಳನ್ನೂ ಸುಂದರವಾದ ವೈಭವಪೂರ್ಣ ಕೆತ್ತನೆಯಲ್ಲಿ ಸೆರೆ ಹಿಡಿದಿರುವುದು ಈ ದೇವಾಲಯದ ವಿಶೇಷತೆಯಾಗಿದೆ.
















































ಸಹೃದಯ ಕನ್ನಡ ಬಂಧುಗಳಿಗೆ ಧನ್ಯವಾದಗಳು.. 
ಮತ್ತೊಮ್ಮೆ ಹೃದಯಪೂರ್ವಕ ಧನ್ಯವಾದಗಳು..
ಜೈ ಕನ್ನಡಾಂಭೆ....

List of Places in Karnataka “One State Many Worlds”

“This is just a Information Blog for all the travellers who want to explore the Beautiful State of Karnataka” Karnataka, a state in So...

Popular Posts